By Village Missionary Movement
Monday, 10-Nov-2025ಧೈನಂದಿನ ಧ್ಯಾನ(Kannada) – 10.11.2025
No ಹೇಳೋಣ!
"...ನನಗೋಸ್ಕರ ಆಕೆಯನ್ನೇ ತೆಗೆದುಕೊಳ್ಳಬೇಕು; ಆಕೆಯನ್ನೇ ಮೆಚ್ಚಿಕೊಂಡಿದ್ದೇನೆ ಅಂದನು" - ನ್ಯಾಯಸ್ಥಾಪಕರು 14:3
ಹಚ್ಚ ಹಸಿರಾಗಿದ್ದ ಒಂದು ಕಾಡಿನ ಭಾಗದಲ್ಲಿ ಕುರಿಮರಿಯೊಂದು ಮೇಯುತ್ತಿತ್ತು. ಆ ಕುರಿಮರಿಯೂ ಸಹ ತನಗೆ ಇಷ್ಟ ಬಂದಂತೆ ಇಲ್ಲಿ ಅಲ್ಲಿ ಮೇಯುತ್ತಿತ್ತು. ಸ್ವಲ್ಪ ಸಮಯದ ನಂತರ, ಪುಟ್ಟ ಕುರಿಮರಿಗೆ ನೀರಿಗಾಗಿ ಬಾಯಾರಿಕೆಯಾಯಿತು. ಸುತ್ತಲೂ ಬಾವಿಗಳಿದ್ದರೂ, ಅದಕ್ಕೆ ಎಲ್ಲಿಯೂ ನೀರು ಸಿಗಲಿಲ್ಲ. ಸ್ವಲ್ಪ ಮುಂದೆ ಹೋದ ನಂತರ, ಒಂದು ದೊಡ್ಡ ಬಾವಿ ಇತ್ತು. ಬಾವಿಯೊಳಗೆ ನೀರು ಇತ್ತು. ಅದರ ಗೋಡೆಯ ಬದಿಯಲ್ಲಿ ಹಸಿರು ಹುಲ್ಲು ಕೂಡ ಬೆಳೆಯುತ್ತಿತ್ತು. ಕುರಿಮರಿ ಅದನ್ನು ನೋಡಿದ ತಕ್ಷಣ ಕುಡಿಯಲು ನೀರು ಸಿಕ್ಕಿತು, ನೀರಿನ ಸುತ್ತಲಿನ ಹಸಿರು ಹುಲ್ಲನ್ನು ಸಹ ತಿನ್ನಬಹುದೆಂದು ಯೋಚಿಸಿ ಸಂತೋಷಿಸಿತು. ಬಾವಿಯೊಳಗೆ ಓರೆಯಾಗಿ ಮೆಟ್ಟಿಲೂ ಇತ್ತು. ಅದು ನಿಧಾನವಾಗಿ ಅದರ ಮೂಲಕ ಇಳಿಯಿತು. ಹಸಿರು ಹುಲ್ಲನ್ನು ಮೇಯ್ದು, ನೀರು ಕುಡಿಯಲು ಬಾವಿಯ ತಳಮಟ್ಟಕ್ಕೆ ಹೋಗಿ ಬಿಟ್ಟಿತು. ಬಾಯಾರಿಕೆ ಚೆನ್ನಾಗಿ ತಣಿಯುವಷ್ಟು ನೀರು ಕುಡಿದು, ಸರಿ ಇನ್ನು ಮೇಲಕ್ಕೆ ಹೋಗೋಣ ಎಂದು ಮೆಟ್ಟಿಲುಗಳನ್ನು ಏರಲು ಪ್ರಯತ್ನಿಸಿತು. ಪಾಪ ಅದಕ್ಕೆ ಏರಲು ಸಾಧ್ಯವಾಗಲಿಲ್ಲ. ಮೆಟ್ಟಿಲುಗಳ ನಡುವಿನ ಅಂತರವು ಅಗಲ ಮತ್ತು ಎತ್ತರವಾಗಿದ್ದರಿಂದ, ತನ್ನ ಪಾದಗಳನ್ನು ಅವುಗಳ ಮೇಲೆ ಇಡಲು ಸಾಧ್ಯವಾಗದೆ ಕಿರುಚುತ್ತಲೇ ಇತ್ತು. ಮರುದಿನವೇ ಅದು ಅದರ ಮಾಲೀಕರಿಗೆ ಸಿಕ್ಕಿತು. ಹೌದು, ಕಣ್ಣಿಗೆ ಸುಂದರವಾಗಿ ಕಾಣುವ ಎಲ್ಲವನ್ನೂ ನಾವು ತಕ್ಷಣ ಅನುಭವಿಸಲು ಆಸೆಪಡಬಾರದು.
ಹಳೆಯ ಒಡಂಬಡಿಕೆಯಲ್ಲಿ ನಮಗೆ ಸಂಸೋನನ ಪರಿಚಯವಿದೆ. ಕರ್ತನ ದೂತನು ಸಂಸೋನನ ಬಗ್ಗೆ "ಅವನ ತಲೆಯ ಮೇಲೆ ಕ್ಷೌರಕತ್ತಿ ಬರಬಾರದು, ಏಕೆಂದರೆ ಮಗು ಗರ್ಭದಿಂದಲೇ ದೇವರಿಗೆ ನಜರೀತನಾಗಿರುತ್ತಾನೆ ಮತ್ತು ಅವನು ಇಸ್ರಾಯೇಲ್ಯರನ್ನು ಫಿಲಿಷ್ಟಿಯರ ಕೈಯಿಂದ ರಕ್ಷಿಸಲು ಪ್ರಾರಂಭಿಸುತ್ತಾನೆ" ಎಂದರು. ಇಂತಹ ಸಂಸೋನನು ತಿಮ್ನಾತ್ಗೆ ಹೋಗಿ ಫಿಲಿಷ್ಟಿಯರ ಹೆಣ್ಣುಮಕ್ಕಳಲ್ಲಿ ಒಬ್ಬ ಸ್ತೀಯನ್ನು ನೋಡಿ, "ನನಗೋಸ್ಕರ ಆಕೆಯನ್ನೇ ತೆಗೆದುಕೊಳ್ಳಬೇಕು; ಆಕೆಯನ್ನೇ ಮೆಚ್ಚಿಕೊಂಡಿದ್ದೇನೆ ಅಂದನು. "ಹೀಗೆ ಸಂಸೋನನು ತನ್ನ ಮೇಲಿದ್ದ ದೇವರ ಯೋಜನೆಯನ್ನು ಕಳೆದುಕೊಂಡನು.
ಇದನ್ನು ಓದುತ್ತಿರುವ ಪ್ರಿಯರೇ! ನಾವು ಹುಟ್ಟುವ ಮೊದಲೇ ದೇವರು ತನ್ನ ಯೋಜನೆಯನ್ನು ನಮ್ಮ ಮೇಲೆ ಇಡುತ್ತಾರೆ. ನಾವು ಆ ದೈವಿಕ ಯೋಜನೆಗೆ ಅನುಗುಣವಾಗಿರುವಂತೆ ನಮಗೆ ಮಾರ್ಗದರ್ಶನ ನೀಡುತ್ತಾರೆ. ಸಂಸೋನನು ತನ್ನ ಹೆತ್ತವರಿಗೆ ವಿಧೇಯನಾಗದೇ, ಆಕೆಯನ್ನೇ ಮೆಚ್ಚಿಕೊಂಡಿದ್ದೇನೆ ಎಂದು ಹೇಳಿ ದೇವರ ಯೋಜನೆಯಿಂದ ದೂರ ಹೋದನು. ನಾವು ಸಹ ಕೆಲವೊಮ್ಮೆ ನೋಡುವುದೆಲ್ಲಾ ಚೆನ್ನಾಗಿದೆ ಎಂದು ನೋಡಿದ ಕೂಡಲೇ ಆಸೆಪಟ್ಟು ತಕ್ಷಣ ಅದನ್ನು ಪಡೆದುಕೊಳ್ಳಲು ಬಯಸುತ್ತೇವೆ. ಇದು ನಮಗೆ ಅಗತ್ಯವೇ ಎಂದು ಯೋಚಿಸಿ ನೋಡಬೇಕು. ಎಲ್ಲವನ್ನು ನೋಡಿದ ತಕ್ಷಣ ಅದನ್ನು ಅನುಭವಿಸಬೇಕು, ತೆಗೆದುಕೊಳ್ಳಬೇಕು ಎಂಬ ಕಲ್ಪನೆಗೆ No ಎಂದು ಹೇಳೋಣ!
- Mrs. ಶಕ್ತಿ ಶಂಕರ್
ಪ್ರಾರ್ಥನಾ ಅಂಶ:
ಪ್ರತಿ ಜಿಲ್ಲೆಯಲ್ಲಿ 300 ಗಿದ್ಯೋನ್ಗಳು ಎದ್ದೇಳುವಂತೆ ಪ್ರಾರ್ಥಿಸಿರಿ.
*Whatsapp*
ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.
www.vmm.org.in
ಈಮೈಲ್:- info@vmm.org.in
Android App: https://play.google.com/store/apps/details?id=com.infobells.vmmorgin
ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001
ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482