By Village Missionary Movement
Friday, 07-Nov-2025ಧೈನಂದಿನ ಧ್ಯಾನ(Kannada) – 08.11.2025
ಕಾರ್ಯ ಮಾಡುವ ಕರ್ತನು
"ಯೆಹೋವನು ನನ್ನ ಕಾರ್ಯವನ್ನು ಸಿದ್ಧಿಗೆ ತರುವನು..." - ಕೀರ್ತನೆ 138:8
ಕಾಲೇಜು ಅಧ್ಯಯನವನ್ನು ಪೂರ್ಣಗೊಳಿಸಿದ ನಂತರ, ಬಾಬು ಕಂಪನಿಯಿಂದ ಕಂಪನಿಗೆ ಕೆಲಸಕ್ಕಾಗಿ ಹೋಗುತ್ತಾ ಮತ್ತು ಸಂದರ್ಶನಗಳಿಗೆ ಹಾಜರಾಗುತ್ತಲೇ ಇದ್ದನು. ಅವನ ಸಹಪಾಠಿಗಳಲ್ಲಿ ಕೆಲವರು ಉನ್ನತ ವ್ಯಾಸಂಗಕ್ಕೆ ಹೋದರು. ಕೆಲವರು ಲಭ್ಯವಿರುವ ಸಣ್ಣ ಕೆಲಸಗಳಿಗೆ ಸೇರಿದರು. ಆದರೆ ಎಷ್ಟೇ ಪ್ರಯತ್ನಿಸಿದರೂ ಕೆಲಸ ಸಿಗದೇ ಹೋದದ್ದರಿಂದ ಬೇಸತ್ತಿದ್ದ ಬಾಬು ಅನ್ನು ತಂದೆ ಕರೆದು ಹತ್ತಿರ ಕುಳಿತುಕೊಳ್ಳುವಂತೆ ಮಾಡಿದರು. ಬಾಬುವಿಗೆ, ಮಗನೇ, "ಅಶ್ವಬಲವು ಯುದ್ಧದಿನಕ್ಕಾಗಿ ಸನ್ನದ್ಧವಾಗಿದ್ದರೂ ಜಯವು ಯೆಹೋವನಿಂದಲೇ" ಎಂಬ ವಚನವನ್ನು ಮನಸ್ಸಿನಲ್ಲಿಟ್ಟುಕೊಂಡು ಜಯವನ್ನು ನೀಡುವ ದೇವರನ್ನು ದೃಢವಾಗಿ ಹಿಡಿದುಕೋ. ನಿನಗೆ ಒಳ್ಳೆಯ ಕೆಲಸವನ್ನು ಕೊಡುವುದು ದೇವರಿಗೆ ಸುಲಭದ ಕೆಲಸ ಎಂದು ಹೇಳಿದರು. ಬಾಬು ತನ್ನ ತಂದೆಯ ಸಲಹೆಯನ್ನು ಸ್ವೀಕರಿಸಿ ಪ್ರತಿದಿನ ಅದೇ ರೀತಿಯಲ್ಲಿ ಪ್ರಾರ್ಥಿಸಲು ಪ್ರಾರಂಭಿಸಿದನು. ಕೆಲವೇ ದಿನಗಳಲ್ಲಿ, ಬಾಬುಗೆ ಒಳ್ಳೆಯ ಕೆಲಸ ಸಿಕ್ಕಿತು. ಬಾಬು ಕೂಡ ಸಂತೋಷದಿಂದ ದೇವರನ್ನು ಸ್ತುತಿಸಿದನು.
ಪೌಲನು ಫಿಲಿಪ್ಪಿ ಪಟ್ಟಣಕ್ಕೆ ಬಂದಾಗ, ಸಬ್ಬತ್ ದಿನದಂದು ಪಟ್ಟಣದ ಹೊರಗೆ ನದಿಯ ಬಳಿ ಕುಳಿತು ಪ್ರಾರ್ಥಿಸಿ ಬೋಧಿಸಿದನು. ಪೌಲನ ಉಪದೇಶವನ್ನು ಕೇಳುತ್ತಿದ್ದ ಲುದ್ಯಳ ಹೃದಯವನ್ನು ದೇವರು ತೆರೆದರು. ವಾಕ್ಯವು ಅವಳಲ್ಲಿ ಕಾರ್ಯ ಮಾಡಲ್ಪಟ್ಟು ರಕ್ಷಿಸಲ್ಪಟ್ಟಳು. ಅವಳು ಮತ್ತು ಅವಳ ಮನೆಯವರು ದೀಕ್ಷಾಸ್ನಾನ ಪಡೆದರು. ನಾವು ನಿಯಮಿತವಾಗಿ ಒಟ್ಟುಗೂಡುವ ಮತ್ತು ಪ್ರಾರ್ಥಿಸುವ ಸ್ಥಳದಲ್ಲಿ ದೇವರು ಕಾರ್ಯ ಮಾಡುತ್ತಾರೆ. ನಾವು ದೇವರಿಗಾಗಿ ಕೆಲಸ ಮಾಡುವುದನ್ನು ಮುಂದುವರಿಸಿದಾಗ, ಅವರೂ ನಮಗಾಗಿ ಕಾರ್ಯ ಮಾಡುತ್ತಾರೆ. ನಾವು ಪ್ರಾರ್ಥನೆಯನ್ನು ಅಭ್ಯಾಸವನ್ನಾಗಿ ಮಾಡಿಕೊಳ್ಳಬೇಕು. ನಾವು ಅಜಾಗರೂಕತೆಯಿಂದ ಮತ್ತು ಆಯಾಸಗೊಳ್ಳದೆ ಪ್ರಾರ್ಥಿಸುವುದನ್ನು ಮುಂದುವರಿಸಿದಾಗ, ನಾವು ವಿಶೇಷವಾದ ಏನನ್ನೂ ಮಾಡಬೇಕಾಗಿಲ್ಲ. ದೇವರು ಸ್ವತಃ ಅಲ್ಲಿ ನಮಗಾಗಿ ಕಾರ್ಯ ಮಾಡುತ್ತಾರೆ. ಪ್ರಾರ್ಥಿಸುವುದು, ಬೈಬಲ್ ಓದುವುದು ಮತ್ತು ಅದನ್ನು ಕಲಿಸುವುದು ನಮ್ಮ ಕರ್ತವ್ಯ. ಕಾರ್ಯ ಮಾಡುವುದು ದೇವರೇ. ನಾವು ಸಾಮಾನ್ಯವಾಗಿ ಮಾಡುವ ಕೆಲಸದಲ್ಲಿ ಆತನೇ ಬದಲಾವಣೆ ಮತ್ತು ವ್ಯತ್ಯಾಸವನ್ನು ತರುತ್ತಾರೆ.
ಪ್ರಿಯರೇ, ನೀವು ಪ್ರಾರ್ಥಿಸುವುದನ್ನು ಅಭ್ಯಾಸವನ್ನಾಗಿ ಮಾಡಿಕೊಳ್ಳಿ. ದೇವರು ಮಾಡುವ ಒಳಿತನ್ನು ಸ್ವತಂತ್ರಿಸಿಕೊಳ್ಳಿ. ಅವುಗಳನ್ನು ಇತರರೊಂದಿಗೆ ಹಂಚಿಕೊಳ್ಳಿ. ನೀವು ಇದನ್ನು ಮುಂದುವರಿಸಿದಾಗ, ದೇವರು ಆ ಸ್ಥಳದಲ್ಲಿ ನಿಮಗಾಗಿ ಕಾರ್ಯ ಮಾಡುತ್ತಾರೆ. ನೀವು ಪ್ರಾರ್ಥಿಸುವುದು ಮತ್ತು ಕಾರ್ಯನಿರ್ವಹಿಸುವುದನ್ನು ಅಭ್ಯಾಸವನ್ನಾಗಿ ಮಾಡಿಕೊಂಡಾಗ, ದೇವರು ಇತರರ ಹೃದಯಗಳನ್ನು ತೆರೆಯುತ್ತಾರೆ. ಏನು ಮಾತನಾಡಬೇಕೆಂದು ಗೊತ್ತಿಲ್ಲವೇ ಎಂದು ಹೇಳುತ್ತೀರಾ? ಮಾತಾಡುವವರು ನೀವಲ್ಲ, ನಿಮ್ಮ ತಂದೆಯ ಆತ್ಮನೇ ನಿಮ್ಮ ಮುಖಾಂತರವಾಗಿ ಮಾತಾಡುವನು (ಮತ್ತಾ. 10:20) ಎಂದು ಬರೆದಿರುವ ಪ್ರಕಾರ ನೀವು ಪ್ರಾರ್ಥಿಸಿಬಿಟ್ಟು ಮಾತನಾಡುವಾಗ, ಅವರೇ ನಿಮ್ಮ ಮೂಲಕ ಕಾರ್ಯ ನಿರ್ವಹಿಸುತ್ತಾರೆ. ಪ್ರಾರ್ಥಿಸುವುದನ್ನು, ಬೈಬಲ್ ಓದಿ ಅನುಸರಿಸುವುದನ್ನು ದೇವರ ಬಗ್ಗೆ ಬೋಧಿಸುವುದನ್ನು ಅಭ್ಯಾಸವನ್ನಾಗಿ ಮಾಡಿಕೊಳ್ಳಿರಿ. ಕರ್ತನೇ ಕಾರ್ಯನಿರ್ವಹಿಸುವರು.
- Mrs.ಅನ್ಬು ಜ್ಯೋತಿ ಸ್ಟಾಲಿನ್
ಪ್ರಾರ್ಥನಾ ಅಂಶ:
ಹಸಿದವರಿಗೆ ಆಹಾರ ನೀಡುವ ಯೋಜನೆಯ ಮೂಲಕ ಪ್ರಯೋಜನ ಪಡೆದವರು ಪ್ರಾಣ, ಆತ್ಮ ಶರೀರದಲ್ಲಿ ಬಿಡುಗಡೆಯನ್ನು ಪಡೆದುಕೊಳ್ಳುವಂತೆ ಪ್ರಾರ್ಥಿಸಿರಿ.
*Whatsapp*
ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.
www.vmm.org.in
ಈಮೈಲ್:- info@vmm.org.in
Android App: https://play.google.com/store/apps/details?id=com.infobells.vmmorgin
ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001
ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482