By Village Missionary Movement
Wednesday, 22-Oct-2025ಧೈನಂದಿನ ಧ್ಯಾನ(Kannada) – 22.10.2025
ಕೇಡಿನಿಂದ ಕಾಪಾಡಲು
"ನೀವು ನನಗೆ ವಿರೋಧವಾಗಿ ಕೇಡನ್ನು ಆಲೋಚಿ ಸಿದಿರಿ; ಆದರೆ ದೇವರು... ಮೇಲಿಗಾಗಿ ಆಲೋಚನೆ ಮಾಡಿದನು." - ಆದಿ.50:20
ಸುಮಾರು 15 ಜನರಿರುವ ಸ್ನೇಹಿತರ ಗುಂಪೊಂದು ಉತ್ತರ ಯುರೋಪಿನ ಕಾಡಿನಲ್ಲಿ ಸಂತೋಷವಾಗಿ ದಿನಗಳನ್ನು ಕಳೆಯಲು ಯೋಜಿಸಿತು. ಅವರು ಮಾತನಾಡುತ್ತಿರುವಾಗ, ದೂರದಲ್ಲಿ ಕಂಡ ಒಂದು ದೃಶ್ಯ ಅವರನ್ನು ಬೆಚ್ಚಿಬೀಳಿಸಿತು. ಹೊಗೆ! ಬೆಂಕಿ! ಆ ಕಾಡಿನಲ್ಲಿ ಒಂದು ಭಾಗದಲ್ಲಿರುವ ಬಿದಿರಿನ ಮರಗಳು ಒಂದಕ್ಕೊಂದು ಡಿಕ್ಕಿ ಹೊಡೆದ ಪರಿಣಾಮವಾಗಿ ಬೆಂಕಿ ಹೊತ್ತಿ ಉರಿಯಿತು. ಅದು ದೊಡ್ಡ ಬೆಂಕಿಯಾಗಿ ಕಾಡನ್ನೇ ಆವರಿಸಿತು. ಅದನ್ನು ನೋಡಿ ಅವರು ದಿಗ್ಭ್ರಮೆಗೊಂಡರು. ಈ ಪರಿಸ್ಥಿತಿಯಲ್ಲಿ, ಒಬ್ಬ ಹುಡುಗ ಬೆಂಕಿಯನ್ನು ನಿಭಾಯಿಸಲು ಮುಂದೆ ಬಂದನು. ಅವನು ಒಂದು ಬೆಂಕಿಕಡ್ಡಿಯನ್ನು ತೆಗೆದುಕೊಂಡು ಗೀಚಿ ನಂತರ ಅದನ್ನು ಸೌದೆಗಳಿಂದ ತುಂಬಿದ್ದ ಸ್ಥಳದಲ್ಲಿ ಎಸೆದನು. ಕಾಡಿನ ಬೆಂಕಿ ಹರಡಿ ಅವರ ಕಡೆಗೆ ಬರುವುದರೊಳಗೆ ಆ ಹುಡುಗ ಇನ್ನೊಂದು ಭಾಗದಲ್ಲಿಯೂ ಬೆಂಕಿ ಹಚ್ಚಿಬಿಟ್ಟನೆಂದು ಎಲ್ಲರೂ ಅವನನ್ನು ಹಿಡಿದು ಹೊಡೆದು ಬಿಟ್ಟರು. ಅಷ್ಟೊತ್ತಿಗೆ, ಸುಮಾರು 50 ಅಡಿ ತ್ರಿಜ್ಯದಲ್ಲಿರುವ ಎಲ್ಲಾ ಹುಲ್ಲು ಸುಟ್ಟು ಬೂದಿಯಾಗಿತ್ತು. ಅವರು ದಿಗ್ಭ್ರಮೆಗೊಂಡರು ಮತ್ತು ಏನು ಮಾಡಬೇಕೆಂದು ತಿಳಿಯಲಿಲ್ಲ. ನಂತರ ಕಾಡಿನ ಬೆಂಕಿ ಅವರ ಸುತ್ತಲೂ ಹರಡಿ ಚೆನ್ನಾಗಿ ಉರಿಯಿತು. ಆದರೆ ಎಂತಹ ಅತಿಶಯ! ಬೆಂಕಿ ಅವರ ಕಡೆಗೆ ಬರಲೇ ಇಲ್ಲ. ಏಕೆಂದರೆ ಅವರು ನಿಂತಿದ್ದ ಸ್ಥಳ ಸುಟ್ಟುಹೋದ ಸ್ಥಳವಾಗಿತ್ತು. ಆದ್ದರಿಂದ ಅಲ್ಲಿಗೆ ಕಾಡ್ಗಿಚ್ಚು ಬರುವ ಸಾಧ್ಯತೆಯೇ ಇರಲಿಲ್ಲ. ಹೌದು, ಆ ಹುಡುಗ ಹಚ್ಚಿದ ಬೆಂಕಿ ಅಲ್ಲಿ ಎಲ್ಲವನ್ನೂ ಸುಟ್ಟು ಹಾಕಿತ್ತು, ಆದ್ದರಿಂದ ಎಲ್ಲರೂ ಅಪಾಯದಿಂದ ಪಾರಾದರು.
ಇದೇ ರೀತಿ, ಸತ್ಯವೇದದಲ್ಲಿ ಬರಲಿರುವ ಅಪಾಯದಿಂದ ಒಂದು ಕುಟುಂಬವನ್ನೇ ರಕ್ಷಿಸಿದ ಘಟನೆಯನ್ನು ಬರೆಯಲಾಗಿದೆ. ಯೋಸೇಫ ಎಂಬ ಯುವಕನನ್ನು ಅವನ ಸಹೋದರರು ದ್ವೇಷಿಸಿ ಹಣಕ್ಕೆ ಮಾರಿದರು. ಯೋಸೇಫನು ತಾನು ಸೆರೆ ಖೈದಿಯಾಗಿ ಕೊಂಡೊಯ್ಯಲ್ಪಟ್ಟ ದೇಶದಲ್ಲಿ ಉನ್ನತೀಕರಿಸಲ್ಪಡುತ್ತಾರೆ. ಆ ದಿನಗಳಲ್ಲಿ, ಅವರು ಬಹಳ ಬುದ್ಧಿವಂತಿಕೆಯಿಂದ ಕಾರ್ಯನಿರ್ವಹಿಸಿದ್ದರಿಂದ ಬರಲಿರುವ ಬರಗಾಲದ ಅಪಾಯದಿಂದ ದೇಶವನ್ನು ತನ್ನ ಇಡೀ ಕುಟುಂಬವನ್ನು ಕಾಪಾಡಿದರು. ಯೋಸೇಫನ ಸಹೋದರರು ಯೋಸೇಫನಿಗೆ ಹಾನಿ ಮಾಡಲು ಬಯಸಿದ್ದರು. ಆದರೆ ದೇವರೋ ಅನೇಕ ಜನರನ್ನು ಜೀವಂತವಾಗಿ ಉಳಿಸಲು ಆ ಕೇಡನ್ನೇ ಹಿತವಾಗಿ ಅಂತ್ಯಗೊಳಿಸಿದರು.
ಇದನ್ನು ಓದುತ್ತಿರುವ ಪ್ರಿಯರೇ, ಮೇಲಿನ ಎರಡೂ ಘಟನೆಗಳಲ್ಲಿ, ಹುಡುಗನನ್ನು ಹೊಡೆಯಲಾಗುತ್ತದೆ, ಯೋಸೇಫನನ್ನು ಅವನ ಸಹೋದರರು ಹೊಡೆಯುತ್ತಾರೆ. ಆದರೆ ಅವರಿಬ್ಬರೂ ಒಳ್ಳೆಯದನ್ನು ಮಾಡಿದರು. ನಮ್ಮೊಂದಿಗಿರುವ ಜನರು ಅಥವಾ ಕುಟುಂಬ ಸದಸ್ಯರು, ನಾವು ಮಾಡಿದ ಒಳ್ಳೆಯದಕ್ಕೆ ಬದಲಾಗಿ, ಅವರ ಕೈಗಳನ್ನು ನಮ್ಮ ವಿರುದ್ಧ ಎತ್ತಿ ನಮಗೆ ಹಾನಿ ಮಾಡಬಹುದು. ಆದರೆ ಕೇಡಿನಿಂದ ತಪ್ಪಿಸಲ್ಪಡಲು ಕರೆಯಲ್ಪಟ್ಟ ನಾವು ಇತರರಿಗೆ ಒಳ್ಳೆಯದನ್ನೇ ಮಾಡೋಣ.
- Bro. ಶಂಕರ್ ರಾಜ್
ಪ್ರಾರ್ಥನಾ ಅಂಶ:
ಒಂದು ಗ್ರಾಮಕ್ಕೆ ಸುವಾರ್ತೆಯನ್ನು ಹರಡಲು ಕನಿಷ್ಠ 1000 ರೂ.ಗಳನ್ನು ನೀಡುವವರು ಎದ್ದೇಳುವಂತೆ ಪ್ರಾರ್ಥಿಸಿರಿ.
*Whatsapp*
ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.
www.vmm.org.in
ಈಮೈಲ್:- info@vmm.org.in
Android App: https://play.google.com/store/apps/details?id=com.infobells.vmmorgin
ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001
ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482