By Village Missionary Movement
Wednesday, 15-Oct-2025ಧೈನಂದಿನ ಧ್ಯಾನ(Kannada) – 15.10.2025
ದೇವರು ಉಪಯೋಗಿಸುವ ಪಾತ್ರೆ
"...ಮರದ ಪಾತ್ರೆಗಳೂ ಮಣ್ಣಿನ ಪಾತ್ರೆಗಳೂ ಇರುತ್ತವೆ; ಅವುಗಳಲ್ಲಿ ಕೆಲವು ಉತ್ತಮವಾದ ಬಳಕೆಗೂ ಕೆಲವು ಹೀನವಾದ ಬಳಕೆಗೂ ಬರುತ್ತವೆ." - 2 ತಿಮೊಥೆ. 2:20
ನಾನು ಬ್ಯಾಂಕಿನಲ್ಲಿ ಅಧಿಕಾರಿಯಾಗಿ ಕೆಲಸ ಮಾಡುತ್ತಿದ್ದಾಗ, ನನ್ನನ್ನು ಪ್ರತಿ ಮೂರು, ನಾಲ್ಕು ವರ್ಷಗಳಿಗೊಮ್ಮೆ ವರ್ಗಾಯಿಸಲಾಗುತ್ತಿತ್ತು. ನನ್ನನ್ನು ಎಲ್ಲಿಗೆ ವರ್ಗಾಯಿಸಲಾಗುತ್ತದೆ ಅಥವಾ ಯಾವಾಗ ಕಳುಹಿಸಲಾಗುತ್ತದೆ ಎಂದು ನನಗೆ ಗೊತ್ತಾಗುತ್ತಿರಲಿಲ್ಲ. ಆದರೆ ನಾನು ಪ್ರಾರ್ಥಿಸಿ ಅದನ್ನು ಕರ್ತನಿಗೆ ಒಪ್ಪಿಸಿಬಿಡುತ್ತಿದ್ದೆ. ಕರ್ತನೇ! ನಾನು ಎಲ್ಲಿದ್ದರೂ, ನಾನು ನಿನ್ನ ಕೈಯಲ್ಲಿ ಉಪಯುಕ್ತ ಪಾತ್ರೆಯಾಗಿರಬೇಕು. "ನನ್ನನ್ನೇ ನಿಮಗೆ ಕೊಟ್ಟಿರುವೆ ಯೇಸುವೇ, ಈಗಲೇ. ಯಾವ ಸ್ಥಳವನ್ನು ನನಗೆ ತೋರಿಸಿದರೂ ಯೇಸುವೇ ಇಗೋ ಹೋಗುವೆ" ಎಂದು ಹಾಡುತ್ತಲೇ ಇದ್ದೆ. ಕರ್ತನೋ ನಾನು ಬೇಡುವದಕ್ಕಿಂತಲೂ ಯೋಚಿಸುವದಕ್ಕಿಂತಲೂ ಅತ್ಯಧಿಕವಾದ ಉತ್ತಮವಾದ ಸ್ಥಳವನ್ನು ಕೊಟ್ಟು ಬಿಡುತ್ತಿದ್ದರು. ನಾನು ದೇವರನ್ನು ಸ್ತುತಿಸುತ್ತಲೇ ಹೋಗಬೇಕಾದ ಸ್ಥಳಕ್ಕೆ ಹೋಗಿಬಿಡುತ್ತಿದ್ದೆ. ದೇವರು ಎಷ್ಟು ಒಳ್ಳೆಯವರು!
ಸತ್ಯವೇದದಲ್ಲಿ ಹೊಸ ಒಡಂಬಡಿಕೆಯಲ್ಲಿ, ಅಪೊಸ್ತಲನಾದ ಪೌಲನು ತಿಮೊಥೆಯನಿಗೆ ಬರೆಯುವಾಗ ಹೀಗೆ ಬರೆಯುತ್ತಾರೆ. ಒಂದು ದೊಡ್ಡ ಮನೆಯಲ್ಲಿ ಬೆಳ್ಳಿಬಂಗಾರದ ಪಾತ್ರೆಗಳಲ್ಲದೆ ಮರದ ಪಾತ್ರೆಗಳೂ ಮಣ್ಣಿನ ಪಾತ್ರೆಗಳೂ ಇರುತ್ತವೆ; ಅವುಗಳಲ್ಲಿ ಕೆಲವು ಉತ್ತಮವಾದ ಬಳಕೆಗೂ ಕೆಲವು ಹೀನವಾದ ಬಳಕೆಗೂ ಬರುತ್ತವೆ. ಚಿನ್ನ ಮತ್ತು ಬೆಳ್ಳಿಯ ಪಾತ್ರೆಗಳು ಅಮೂಲ್ಯ ಲೋಹಗಳಿಂದ ಮಾಡಲ್ಪಟ್ಟಿರುವುದರಿಂದ ಅವುಗಳನ್ನು ಹೆಚ್ಚಿನ ಮೌಲ್ಯವನ್ನು ಹೊಂದಿವೆ ಎಂದು ಪರಿಗಣಿಸಲಾಗುತ್ತದೆ. ಅವುಗಳನ್ನು ಒಂದು ಭಂಡಾರದಲ್ಲಿ, ನಿಧಿ ಕೋಣೆಯಲ್ಲಿ ಇಡಲಾಗುತ್ತದೆ. ಅವುಗಳನ್ನು ಹೆಚ್ಚು ಬಳಸಲಾಗುವುದಿಲ್ಲ. ಹಬ್ಬಗಳ ಸಮಯದಲ್ಲಿ ಮತ್ತು ಸಂಬಂಧಿಕರು ಬಂದಾಗ ಮಾತ್ರ ಅವುಗಳನ್ನು ಬಳಸಲಾಗುತ್ತದೆ. ಇಂತಹ ಜನರು ತಮ್ಮನ್ನು ತಾವು ಅಮೂಲ್ಯರೆಂದು ಪರಿಗಣಿಸುತ್ತಾರೆ. ಇಂತಹ ಜನರನ್ನು ಕರ್ತನು ಉಪಯೋಗಿಸುವುದು ಸ್ವಲ್ಪ ಕಡಿಮೆಯೇ ! ಆದರೆ ಮಣ್ಣು ಮತ್ತು ಮರದಿಂದ ಮಾಡಿದ ಪಾತ್ರೆಗಳನ್ನು ಸಾಮಾನ್ಯವಾಗಿ ಪ್ರತಿಯೊಬ್ಬರೂ ಉಪಯೋಗಿಸುತ್ತಾರೆ ಮತ್ತು ಅವು ಅಗ್ಗವಾಗಿವೆ! ನಾವು ದೇವರ ಕೈಯಲ್ಲಿ ಯಾವ ರೀತಿಯ ಪಾತ್ರೆಗಳಾಗಿರಲು ಬಯಸುತ್ತೇವೆ? ದೇವರು ಜ್ಞಾನಿಗಳನ್ನು ನಾಚಿಕೆಪಡಿಸುವದಕ್ಕಾಗಿ ಬುದ್ಧಿಹೀನರನ್ನು ಆರಿಸಿಕೊಂಡು ಅವರ ಮೂಲಕ ತಾವು ಬಯಸುವ ಸೇವೆಯನ್ನು ನೆರವೇರಿಸಿದರು.
ನಾವು ಪ್ರತಿಯೊಬ್ಬರೂ ನಮ್ಮನ್ನು ನಾವೇ ಪರೀಕ್ಷಿಸಿಕೊಳ್ಳೋಣ. ನಾವು ದೇವರ ಕೈಯಲ್ಲಿ ಯಾವ ರೀತಿಯ ಪಾತ್ರೆಯಾಗಿರಲು ಬಯಸುತ್ತೇವೆ? ಅವರಿಗೆ ಉಪಯುಕ್ತವಾದ ಪಾತ್ರೆಯಾಗಿ ಮಾರ್ಪಡಲು, ನಮ್ಮನ್ನು ಅವರಿಗೆ ಸಂಪೂರ್ಣವಾಗಿ ಅರ್ಪಿಸಿಕೊಳ್ಳೋಣ! ನಮ್ಮನ್ನು ಆತನ ಚಿತ್ತವನ್ನು ಪೂರೈಸುವ ಪಾತ್ರೆಗಳಾಗಿ ಪರಿವರ್ತಿಸುವ ಜವಾಬ್ದಾರಿಯನ್ನು ಆತನಿಗೆ ಒಪ್ಪಿಸೋಣ. ನಾವು ಜೇಡಿಮಣ್ಣಿನಿಂದ ಮಾಡಿದ ಪಾತ್ರೆಗಳಾಗಿದ್ದರೆ, ಅವರಿಗೆ ನಮ್ಮ ಹೃತ್ಪೂರ್ವಕ ಧನ್ಯವಾದಗಳನ್ನು ಅರ್ಪಿಸೋಣ. ಏಕೆಂದರೆ ದೇವರ ಚಿತ್ತವನ್ನು ಮಾಡುವ ಪ್ರತಿಯೊಬ್ಬರಿಗೂ ಪ್ರತಿಫಲವಿದೆ. ದ್ರಾಕ್ಷಿತೋಟದಲ್ಲಿ ವಿವಿಧ ಸಮಯಗಳಲ್ಲಿ ಕೆಲಸ ಮಾಡಲು ನೇಮಕಗೊಂಡವರೆಲ್ಲರೂ ಒಂದು ಹಣವನ್ನು ಕೂಲಿಯಾಗಿ ಪಡೆದಂತೆಯೇ, ನಾವು ಇರುವ ಸ್ಥಳಗಳಲ್ಲಿ ಸಂತೋಷವಾಗಿ ದೇವರ ಚಿತ್ತವನ್ನು ಮಾಡುವುದಾದರೆ, ತಕ್ಕ ಸಮಯದಲ್ಲಿ ಪ್ರತಿಫಲವನ್ನು ಹೊಂದಿಕೊಳ್ಳುತ್ತೇವೆ. ಆಮೆನ್!
- Mrs. ಭುವನಾ ಧನಪಾಲನ್
ಪ್ರಾರ್ಥನಾ ಅಂಶ:
7000 ಮಿಷನರಿಗಳು, ಒಂದು ಲಕ್ಷ ಹಳ್ಳಿಗಳು ಎಂಬ ಗುರಿಗಾಗಿ ಪ್ರಾರ್ಥಿಸಿರಿ.
*Whatsapp*
ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.
www.vmm.org.in
ಈಮೈಲ್:- info@vmm.org.in
Android App: https://play.google.com/store/apps/details?id=com.infobells.vmmorgin
ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001
ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482