By Village Missionary Movement
Tuesday, 14-Oct-2025ಧೈನಂದಿನ ಧ್ಯಾನ(Kannada) – 14.10.2025
ಏನು ಮಾಡಿದರೂ ಕರ್ತನಿಗಾಗಿಯೇ ಮಾಡೋಣ
"ಅವನು ವಿಸ್ಮಯಗೊಂಡು ನಡು ಗುತ್ತಾ--ಕರ್ತನೇ, ನಾನು ಏನು ಮಾಡಬೇಕೆಂದು ನೀನು ಕೋರುತ್ತೀ ಅಂದನು..." - ಅಪೊಸ್ತಲರ ಕೃತ್ಯಗಳು 9:6
ಅಪೊಸ್ತಲನಾದ ಪೌಲನಿಗೆ ಇದ್ದ ದರ್ಶನದಂತೆ, ಭಾರತದಲ್ಲಿ ಜನಿಸಿ ತನ್ನ ಸಿದ್ಧಾಂತದಲ್ಲಿ ಸೌಲನಂತೆ ಇದ್ದು, 'ಭಾರತದ ಅಪೊಸ್ತಲ' ಎಂದು ಹೆಸರುಗೊಂಡವರು ಸಾಧು ಸುಂದರ್ ಸಿಂಗ್ ರವರು.
ಅವರ ಜೀವನ ಪ್ರಯಾಣವು ಸತ್ಯವೇದದಲ್ಲಿರುವ ಭಕ್ತರಿಗೆ ಸಮಾನವಾಗಿ ಕಾಣುತ್ತದೆ. ನಿರ್ಜನ ಬಾವಿಗೆ ಎಸೆಯಲ್ಪಟ್ಟ ಯೆರೆಮಿಯನ ಅನುಭವವು ಇವರಿಗೆ ಉಂಟು. ಒಮ್ಮೆ, ಸಾಧು ಸುಂದರ್ ಸಿಂಗ್ ಟಿಬೆಟ್ನಲ್ಲಿ ಸುವಾರ್ತೆಯನ್ನು ಸಾರಲು ಹೋದಾಗ, ಅವರನ್ನು ಹಿಡಿದು ಆಳವಾದ ಬಾವಿಗೆ ಎಸೆಯಲಾಯಿತು. ಅಲ್ಲಿ, ಅನೇಕ ಜನರ ಮೂಳೆಗಳು ಮತ್ತು ಕೊಳೆಯುತ್ತಿರುವ ಶವಗಳ ದುರ್ವಾಸನೆಯ ನಡುವೆ, ಅವರು ಮೂರು ದಿನಗಳ ಕಾಲ ಪ್ರಾರ್ಥಿಸಿದರು. ಒಬ್ಬ ಮನುಷ್ಯನು ಅವರನ್ನು ಹಗ್ಗದ ಮೂಲಕ ಮೇಲಕ್ಕೆತ್ತಿ ಕಣ್ಮರೆಯಾದನು. ಅಪೊಸ್ತಲನಾದ ಪೌಲನಂತೆ, ಆತ್ಮದಿಂದ ನಡೆಸಲ್ಪಡುವ ಅನುಭವ ಮತ್ತು ಫಿಲಿಪ್ಪನನ್ನು ಪವಿತ್ರಾತ್ಮನು ಕರೆದೊಯ್ಯಲ್ಪಟ್ಟ ಅನುಭವ ಸಾಧು ಸುಂದರ್ ಸಿಂಗ್ಗೆ ಉಂಟು. ಇವರ ಸೇವೆ, ಬೋಧನೆಗಳು ಮತ್ತು ಅನುಭವವನ್ನು ನೋಡಿದ ಸಾವಿರಾರು ಜನರು ಮಿಷನರಿಗಳಾಗಿ ದೇವರ ಸೇವೆಗೆ ತಮ್ಮನ್ನು ಅರ್ಪಿಸಿಕೊಂಡರು. ಇಂದು, ಅವರು ತಮ್ಮನ್ನು ತಾವು ಸಮರ್ಪಿಸಿಕೊಂಡಂತೆ, ನಾವು ಸಹ ನಮ್ಮನ್ನು ಸಮರ್ಪಿಸಿಕೊಳ್ಳೋಣ ಮತ್ತು ಇತರರನ್ನೂ ಆತ್ಮಗಳನ್ನು ಕೊಯ್ಲು ಮಾಡುವ ಕೆಲಸಕ್ಕೆ ಕರೆದುಕೊಂಡು ಬರೋಣ.
ಅವರು ಟಿಬೆಟ್, ನೇಪಾಳ ಮತ್ತು ಭಾರತದ ಅನೇಕ ಭಾಗಗಳಲ್ಲಿ ಸೇವೆ ಸಲ್ಲಿಸಿದ್ದಾರೆ. ಅವರು ತುಂಬಾ ಸರಳವಾದವರು, ಇಂಪಾದವರು ಮತ್ತು ಸತ್ಯವೇದದಲ್ಲಿರುವವುಗಳನ್ನು ದೃಷ್ಟಾಂತಗಳ ಮೂಲಕ ಬೋಧಿಸುವಲ್ಲಿ ಅತ್ಯುತ್ತಮರು. ಇವರು ಬರೆದಿರುವ ಪುಸ್ತಕಗಳು ಕ್ರೈಸ್ತ ಜೀವನದ ಊರುಗೋಲುಗಳಾಗಿವೆ. 'ರಕ್ತಸಿಕ್ತ ಪಾದಗಳನ್ನು ಹೊಂದಿರುವ ಅಪೊಸ್ತಲ' ಎಂದು ಕರೆಯಲ್ಪಟ್ಟ ಇವರಂತೆ ಇನ್ನೂ ಅನೇಕರು ಎದ್ದೇಳುವಂತೆ ಪ್ರಾರ್ಥಿಸೋಣ. ರಕ್ತ ಸಾಕ್ಷಿಗಳಾಗಿ ಸಾಯಲು ದೇವರಿಗೆ ನಮ್ಮನ್ನು ಒಪ್ಪಿಸಿಕೊಡಲು ಇವರ ಜೀವನವು ನಮ್ಮನ್ನು ಪ್ರೋತ್ಸಾಹಿಸುತ್ತಿದೆ. ಅನೇಕ ವಿಷಯಗಳಿಗಾಗಿ ಪ್ರಾರ್ಥಿಸುವ ನಾವು, ಯೇಸು ಬಯಸುವ ಈ ಪ್ರಾರ್ಥನೆಯನ್ನು ಸಹ ಮಾಡೋಣ.
"ಆದದರಿಂದ ಬೆಳೆಯ ಯಜ ಮಾನನು ಕೆಲಸಗಾರರನ್ನು ತನ್ನ ಬೆಳೆಗೆ ಕಳುಹಿಸುವಂತೆ ಆತನನ್ನು ಪ್ರಾರ್ಥಿಸಿರಿ ಅಂದನು." (ಮತ್ತಾ. 9:38)
"ನೀವು ಯಾವದನ್ನು ಮಾಡಿದರೂ ಅದನ್ನು ಮನುಷ್ಯರಿ ಗೋಸ್ಕರವೆಂದು ಮಾಡದೆ ಕರ್ತನಿಗೋಸ್ಕರವೇ ಎಂದು ಹೃದಯಪೂರ್ವಕವಾಗಿ ಮಾಡಿರಿ" (ಕೊಲೊಸ್ಸೆ. 3:24). ಇಂದು ಕರ್ತನ ಮುಖ್ಯ ಕೆಲಸವೆಂದರೆ ಸುವಾರ್ತೆಯ ಕೆಲಸ. ಇದನ್ನು ಮಾಡಲು ಬಹುಸಂಖ್ಯೆಯ ವಿಶ್ವಾಸಿಗಳು ಎದ್ದುಬರಬೇಕೆಂದು ಪ್ರಾರ್ಥಿಸಬೇಕಾಗಿದೆ. ಇದರ ಅಗತ್ಯಗಳು ಪೂರೈಸಲ್ಪಡಲು ಕೊಡುವ ಜನರನ್ನು ದೇವರು ಎಬ್ಬಿಸಿಕೊಡುವಂತೆ ನಾವು ಪ್ರಾರ್ಥಿಸೋಣ. ದೇವರು ತಾನೇ ನಮ್ಮೆಲ್ಲರನ್ನೂ ತನ್ನ ಉನ್ನತವಾದ ಕೆಲಸದಲ್ಲಿ ಉಪಯೋಗಿಸಲಿ. ಆಮೆನ್.
- Mrs. ಫಾತಿಮಾ ಸೆಲ್ವರಾಜ್
ಪ್ರಾರ್ಥನಾ ಅಂಶ:
ಅಡಿಪಾಯ ಹಾಕಿ 52 ದಿನಗಳಲ್ಲಿ ಮಿಷನರಿ ತರಬೇತಿ ಕಟ್ಟಡದ ಮೊದಲ ಮಹಡಿಯನ್ನು ಕಟ್ಟಿ ಮುಗಿಸುವಂತೆ ಪ್ರಾರ್ಥಿಸಿರಿ.
*Whatsapp*
ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.
www.vmm.org.in
ಈಮೈಲ್:- info@vmm.org.in
Android App: https://play.google.com/store/apps/details?id=com.infobells.vmmorgin
ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001
ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482