By Village Missionary Movement
Wednesday, 09-Jul-2025ಧೈನಂದಿನ ಧ್ಯಾನ(Kannada) – 09.07.2025
ನಮ್ಮನ್ನು ರಕ್ಷಿಸುವಾತನು
"...ನೀನು ತಣ್ಣಗಾಗಲಿ ಬೆಚ್ಚಗಾಗಲಿ ಇದ್ದರೆ ಒಳ್ಳೇದಾಗಿತ್ತು" - ಪ್ರಕ. 3:15
ಒಂದು ಸಾಂಪ್ರದಾಯಿಕ ಕ್ರೈಸ್ತ ಕುಟುಂಬಕ್ಕೆ ಸೇರಿದ್ದ ನನಗೆ ಚರ್ಚ್ಗೆ ಹೋಗುವ ಅಭ್ಯಾಸವಿತ್ತು. ಆದರೆ ನನಗೆ ಬೈಬಲ್ ಓದುವ ಅಭ್ಯಾಸವೆಲ್ಲ ಇರಲಿಲ್ಲ, ಕರ್ತನಿಗೆ ಭಯಪಡುವ ಜೀವನವೂ ಇರಲಿಲ್ಲ. ನಾನು ಲೌಕಿಕ ಜೀವನವನ್ನು ನಡೆಸುತ್ತಿದ್ದೆ. ನಾನು ರಕ್ಷಣೆಯಿಲ್ಲದೆ ಕ್ರೈಸ್ತ ಜೀವನವನ್ನು ನಡೆಸುತ್ತಿದ್ದೆ. ನನ್ನ ತಂದೆ ಮತ್ತು ತಾಯಿ ಒಬ್ಬರ ನಂತರ ಒಬ್ಬರು ಸತ್ತುಹೋದಾಗ, ನನ್ನ ಜೀವನವು ಕತ್ತಲೆಯಂತೆ ತೋರುತ್ತಿತ್ತು. ಅಂತಹ ಸಮಯದಲ್ಲಿ, ನಾನು ಒಬ್ಬ ಸಹೋದರಿಯ ಮನೆಯಲ್ಲಿ ನಡೆಯುವ ಪ್ರಾರ್ಥನಾ ಕೂಟಕ್ಕೆ ಹೋಗಿದ್ದೆ. ಅಲ್ಲಿಗೆ ಬಂದ ಸೇವಕರು ಸತ್ಯವೇದವನ್ನು ಓದಿದರು. ಅದರಲ್ಲಿ, "ನೀನು ಜೀವಂತನೆಂದು ಹೆಸರುಗೊಂಡಿದ್ದರೂ ಸತ್ತವನಾಗಿದ್ದೀ" ಎಂಬ ಈ ವಚನ ನನ್ನ ಹೃದಯವನ್ನು ಮುಟ್ಟಿತು. ನಾನು ಸತ್ಯವೇದವನ್ನು ತೆಗೆದುಕೊಂಡು ಅದನ್ನು ಓದುತ್ತಾ, ಓದುತ್ತಾ ಯೇಸುವನ್ನು ಅರಿತುಕೊಳ್ಳುವ ಜ್ಞಾನವು ನನ್ನೊಳಗೆ ಹೆಚ್ಚಾಗಿ ಬೆಳೆಯಲು ಪ್ರಾರಂಭಿಸಿತು. ಆಗ ನನ್ನ ಹೃದಯ ಪರಿವರ್ತನೆಯಾಯಿತು ನಾನು ರಕ್ಷಣೆ ಹೊಂದಿದೆ.
1963 ರಲ್ಲಿ ಜನಿಸಿದ ನಾನು 1984 ನೇ ವರ್ಷದಲ್ಲಿ ರಕ್ಷಿಸಲ್ಪಟ್ಟೆ. ನನ್ನ ಜೀವನದಲ್ಲಿ ರಕ್ಷಣೆ ಬಂದ ನಂತರ, ನನ್ನ ಮಾತು ಮತ್ತು ಕಾರ್ಯಗಳೆಲ್ಲವೂ ಬದಲಾಯಿತು. ಸಭೆಯ ಆರಾಧನೆಯನ್ನು ಎಷ್ಟು ಮಾತ್ರಕ್ಕೂ ತಪ್ಪಿಸಿಕೊಳ್ಳದೆ ಹಾಜರಾಗುತ್ತಿದ್ದೆ. ನನ್ನ ಕುಟುಂಬ ಸದಸ್ಯರು ನನ್ನನ್ನು ಹುಚ್ಚಿ ಮತ್ತು ದೊಡ್ಡ ಭಕ್ತೆ ಎಂದೆಲ್ಲಾ ಅಪಹಾಸ್ಯ ಮಾಡಲು ಪ್ರಾರಂಭಿಸಿದರು. ನಾನು ಯೇಸುವಿನ ಮೇಲೆ ಕೇಂದ್ರೀಕರಿಸಿ ಬದುಕಲು ಪ್ರಾರಂಭಿಸಿದಾಗ, ನನಗೆ ದೇವರ ಬೆಂಬಲ ಮತ್ತು ಆಶೀರ್ವಾದಗಳು ದೊರೆತವು.
ನನಗೆ ತಾಯಿ ಮತ್ತು ತಂದೆ ಇಲ್ಲದ ಕಾರಣ ನನಗೆ ಮದುವೆ ಹೇಗೆ ನಡೆಯುತ್ತದೆ ಎಂದು ಚಿಂತಿತಳಾಗಿದ್ದೆ. ಕರ್ತನು ನನ್ನ ಮಾನಸಿಕ ನೋವನ್ನು ಅರ್ಥಮಾಡಿಕೊಂಡು 1988 ರಲ್ಲಿ ನಾನು ಮದುವೆಯಾಗಲು ಸಹಾಯ ಮಾಡಿದರು. ನಾನು ಒಬ್ಬ ಸೇವಕರನ್ನು ಮದುವೆಯಾಗಲು ಬಯಸಿದ್ದೆ. ಆದರೆ ನನ್ನ ಮದುವೆಯ ನಂತರ, ನನ್ನ ಪತಿ ಸೇವೆಗೆ ತನ್ನನ್ನು ಅರ್ಪಿಸಿಕೊಂಡು ಬೈಬಲ್ ಕಾಲೇಜಿಗೆ ಹೋದರು. ಅವರು ಪದವಿ ಪಡೆದ ನಂತರ, ನಾನು ನನ್ನ ಉತ್ತಮ ಕೆಲಸವನ್ನು ಬಿಟ್ಟು ನನ್ನ ಪತಿಯೊಂದಿಗೆ ಸೇವೆಯಲ್ಲಿ ಸೇರಿಕೊಂಡೆ. ನಾವು 1994 ರಿಂದ 2010 ರವರೆಗೆ ಸಭೆ ಸೇವೆ ಮಾಡಿದೆವು. ನಾವು 2011 ನೇ ವರ್ಷದಿಂದ 2025 ನೇ ವರ್ಷದ ವರೆಗೆ ಸಭೆಗಳ ಮಧ್ಯದಲ್ಲಿ ಸೇವೆ ಮಾಡುತ್ತಿದ್ದೇವೆ. ಕಳೆದ ಒಂದು ವರ್ಷದಿಂದ, ನಾವು ಗ್ರಾಮ ಮಿಷನರಿ ಚಳುವಳಿಯೊಂದಿಗೆ ಸೇರಿ ಕರ್ತನ ಸೇವೆ ಮಾಡುತ್ತಿದ್ದೇವೆ.
ಇದನ್ನು ಓದುತ್ತಿರುವ ಯಾರಾದರೂ ಹೆಸರಿಗೆ ಮಾತ್ರ ಕ್ರೈಸ್ತರಾಗಿದ್ದು ಯೇಸು ಯಾರೆಂದು ತಿಳಿದಿದ್ದರೂ ರಕ್ಷಣೆ ಹೊಂದದೆ ಸಭೆಗೆ ಹೋಗುತ್ತಿದ್ದರೆ ಸತ್ಯದಿಂದ ಬಿಡುಗಡೆಯಾಗದೇ ಇರುವುದಾದರೆ, ರಕ್ಷಣೆಯು ನಮ್ಮಿಂದ ದೂರವಿಲ್ಲ ಎಂಬುದನ್ನು ತಿಳಿಯಿರಿ. ಇಂದೇ ರಕ್ಷಣೆಯ ದಿನ ಆತನ ಬಳಿಗೆ ಬಂದುಬಿಡಿ. ಕುತೂಹಲದಿಂದ ನಿಮ್ಮನ್ನು ಕರೆಯುತ್ತಿದ್ದಾರೆ.
- Mrs. ಹೆಪ್ಸಿಬಾ ಇಮ್ಮಾನುವೇಲ್
ಪ್ರಾರ್ಥನಾ ಅಂಶ:
ಫಿಲಿಪ್ ಗಾಸ್ಪಲ್ ತಂಡದ ಸೇವೆಯ ಮೂಲಕ ಭೇಟಿ ಮಾಡಿದ ಹಳ್ಳಿಗಳು ದೇವರನ್ನು ತಿಳಿದುಕೊಳ್ಳುವಂತೆ ಪ್ರಾರ್ಥಿಸಿರಿ.
*Whatsapp*
ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.
www.vmm.org.in
ಈಮೈಲ್:- info@vmm.org.in
Android App: https://play.google.com/store/apps/details?id=com.infobells.vmmorgin
ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001
ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482