By Village Missionary Movement
Sunday, 23-May-2021ಧೈನಂದಿನ ಧ್ಯಾನ(Kannada) – 23.05.2021 (Kids Special)
ದಾರಿತೋರಿಸುವ ಶಿಲುಬೆ
"ನಾನು ಹಿಡಿಯುವ ಮಾರ್ಗವನ್ನು ಆತನು ತಿಳಿದಿದ್ದಾನೆ,...." - ಯೋಬ 23:10
ವರ್ಷಿಣಿ ಮುಂಜಾನೆ ಎದ್ದ ಕೂಡಲೇ ತುಂಬಾ ಜಾಲಿಯಾಗಿ ಸಂತೋಷವಾಗಿ ಹೊರಟಳು. ಅಲ್ಲಿ ಇಲ್ಲಿ ಓಡಿದಳು. ಯಾವ ಡ್ರೆಸ್ ಹಾಕಿಕೊಳ್ಳಬೇಕೆಂದು ಸೆಲೆಕ್ಟ್ ಮಾಡಿದಳು. ಅಮ್ಮ ನಾನು ಎಷ್ಟು ಬೇಗನೆ ಹೊರಟಿದ್ದೇನೆ ನೋಡಿದ್ರಾ? ನೀವು ಇನ್ನೂ ಹೊರಡಲಿಲ್ಲವಾ? ಅಯ್ಯೋ ಬೇಗನೆ ಹೊರಡಿ ಎಂದು ಅವಸರ ಮಾಡಿದಳು ವರ್ಷಿಣಿ. Tour ಗೆ ಹೋಗೋಣ ಎಂದು ಹೇಳಿದ ಕೂಡಲೇ ಅಷ್ಟೊಂದು ಸಂತೋಷ ವರ್ಷಿಣಿ ಗೆ, ಅದರಲ್ಲೂ zoo ಗೆ ಹೋಗೋದು ಎರಡುಪಟ್ಟು ಸಂತೋಷವಾಗಿತ್ತು. ನಿಮಗೂ ಸಂತೋಷವಾಗಿದೆಯಾ. ಅಲ್ಲಿ ಯಾವ್ಯಾವ ಪ್ರಾಣಿಗಳೆಲ್ಲ ಇರುತ್ತೆ ಹೇಳಿ ನೋಡೋಣ ಪುಟಾಣಿಗಳೇ. Tiger, lion elephant, deer ಇನ್ನೂ ಹೇಳಿಕೊಂಡೆ ಹೋಗಬಹುದು. ನೀವು tour ಗೆ ಹೋಗಿದ್ದೀರಾ. ಓ....... School ನಿಂದ ಕರೆದುಕೊಂಡು ಹೋದರಾ. ಸಿಂಹವನ್ನು ನೇರವಾಗಿ ನೋಡುವಾಗ ತುಂಬಾ ಭಯವಾಗುತ್ತೆ ಅಲ್ವಾ? ಅದರಂತೆಯೇ ವರ್ಷಿಣಿ ಎಲ್ಲಾ ಸ್ಥಳವನ್ನು ಸುತ್ತಿ ನೋಡಿದಳು. ಒಂದೊಂದು ಪ್ರಾಣಿಯನ್ನು ನೋಡುವಾಗ ಆಶ್ಚರ್ಯವಾಗಿತ್ತು. ಅಪ್ಪ ಹೇಳಿದರು ನಮ್ಮ ಕೈಹಿಡಿದು ಕೊಳ್ಳಬೇಕು ತುಂಬಾ ಜನರ ಗುಂಪಿದೆ. Animals ಇರುವ ಕಂಬಿಯನ್ನು ಮುಟ್ಟಬಾರದು ಎಂದು ಎಚ್ಚರಿಕೆಯ ಮಾತುಗಳನ್ನು ಹೇಳಿದರು. ಸರಿ ಅಪ್ಪ ಎಂದು ಕೇಳಿಸಿಕೊಂಡಳು. Animals- ಗಳನ್ನು ನೋಡುತ್ತಾ, ನೋಡುತ್ತಾ ಆ ಸ್ಥಳವನ್ನು ಬಿಟ್ಟು ಬರಲು ವರ್ಷಿಣಿ ಗೆ ಮನಸ್ಸೇ ಇರಲಿಲ್ಲ. ಅಪ್ಪ ಕೈಬಿಡಿ, ನಾನು ನಿಮ್ಮ ಹಿಂದೇನೆ ಬಂದುಬಿಡುತ್ತೇನೆ ಎಂದು ಹೇಳಿ ಕೈಯನ್ನು ಎಳೆದುಕೊಂಡಳು. ಅಪ್ಪ, ಅಮ್ಮ ವರ್ಷಿಣಿಯನ್ನು ತಿರುಗಿ ನೋಡುತ್ತಲೇ ಬರುತ್ತಿದ್ದರು. ಸ್ವಲ್ಪ ದೂರ ಹೋದನಂತರ ವರ್ಷಿಣಿಯನ್ನು ನೋಡಿದರೆ ಕಾಣದೆ ಹೋಗಿಬಿಟ್ಟಳು. ಅಪ್ಪ, ಅಮ್ಮ ಬೆಚ್ಚಿ ಹೋದರು. ವರ್ಷಿಣಿ, ವರ್ಷಿಣಿ ಎಂದು ಶಬ್ದವಾಗಿ ಕೂಗಿದರು. ವರ್ಷಿಣಿ ದಾರಿ ತಪ್ಪಿ ಹೋಗಿ ಬೇರೆ ಸ್ಥಳಕ್ಕೆ ಹೊರಟುಹೋದಳು. ಅಪ್ಪ-ಅಮ್ಮ ಎಂದು ಅಳುತ್ತಲೇ ಹೋದಳು. ದಾರಿಯಲ್ಲಿ ಹೋಗುತ್ತಿದ್ದ ವ್ಯಕ್ತಿಯ ಬಳಿ ನಮ್ಮ ಅಮ್ಮನನ್ನು ನೋಡುದ್ರಾ? ನನ್ನ ಅಪ್ಪನನ್ನು ನೋಡುದ್ರಾ? ಎಂದು ಕೇಳಿದಳು, ಒಬ್ಬರಿಗೂ ಗೊತ್ತಿಲ್ಲ. ಅಳುತ್ತಲೇ ಹೋದಳು. ಸುತ್ತಲೂ ನೋಡಿದಳು ಅವಳ ಕಣ್ಣಿಗೆ ಶಿಲುಬೆ ಕಾಣಿಸಿತು. ಆ ಶಿಲುಬೆಯನ್ನು ನೋಡುತ್ತಲೇ ನಡೆದಳು. ದೇವಾಲಯವು ಬಂತು ಆ ಆಲಯವನ್ನು ನೋಡಿದ ಕೂಡಲೇ ಹೃದಯದಲ್ಲಿದ್ದ ಭಯವೆಲ್ಲಾ ಹಾರಿಹೋಯಿತು. ಅಲ್ಲಿ pastor ಇದ್ದರು ವರ್ಷಿಣಿ ಯನ್ನು ಪ್ರೀತಿಯಿಂದ ವಿಚಾರಿಸಿದರು. ವಿಳಾಸವನ್ನು ಕೇಳಿ ತಿಳಿದುಕೊಂಡರು.ನಾನೇ ನಿನ್ನನ್ನು ನಿನ್ನ ಹೆತ್ತವರ ಬಳಿ ಕರೆದುಕೊಂಡು ಹೋಗುತ್ತೇನೆ ಎಂದು ವರ್ಷಿಣಿಯನ್ನು ಅವರ ತಂದೆ ತಾಯಿಗೆ ಒಪ್ಪಿಸಿದರು. ವರ್ಷಿಣಿ ಯನ್ನು ಕಂಡ ಪೋಷಕರು ಯೇಸಪ್ಪಾಗೆ ಕೃತಜ್ಞತೆ ಹೇಳಿದರು. ಸರಿಯಾದ ಸಮಯದಲ್ಲಿ ದೇವರು ನಿಮ್ಮನ್ನು ಭೇಟಿ ಮಾಡಲು ಸಹಾಯ ಮಾಡಿದ್ದಾರೆ ಎಂದು pastor ಗೂ, ಯೇಸಪ್ಪಾಗೂ thanks ಹೇಳಿದರು.
ಪ್ರೀತಿಯ ಮುದ್ದು ಮಕ್ಕಳೇ! ನಿಮ್ಮ ಕುಟುಂಬದಲ್ಲಿಯೂ ಜೀವಿಸುವುದಕ್ಕೆ ದಾರಿ ಗೊತ್ತಿಲ್ಲದೆ, ಹಣದ ಕಷ್ಟ, ರೋಗ, ಬಡತನ ಎಂದು ಚಿಂತಿಸುತ್ತಾ ಇರಬಹುದು. ಶಿಲುಬೆಯನ್ನು ದೃಷ್ಟಿಸಿ ನೋಡಿರಿ. ನೀವು ಚೆನ್ನಾಗಿರಬೇಕೆಂತಲೇ ಶಿಲುಬೆಯಲ್ಲಿ ರಕ್ತ ಸುರಿಸಿ ಯೇಸಪ್ಪ ಮರಣಹೊಂದಿದರು. ಅವರು ನಿಮ್ಮನ್ನು ಸರಿಯಾದ ದಾರಿಯಲ್ಲಿ ನಡೆಸಿ, ನಿಮ್ಮ ಅವಶ್ಯಕತೆಗಳನ್ನು ಸಂಧಿಸಲು ಸರ್ವಶಕ್ತನಾಗಿದ್ದಾರೆ. ಆಮೆನ್.
- Sis. ದೆಬೋರಾಳ್
ಈ ದಿನದ ಧ್ಯಾನ ವಾಕ್ಯಕ್ಕಾಗಿ ಇಲ್ಲಿ ಕೆಳಗಿನ ನಂಬರ್ ಗಳನ್ನು ಸಂಪರ್ಕಿಸಿ.
ವಾಟ್ಸಾಪ್.
ತಮಿಳಿಗಾಗಿ +919444011864
ಇಂಗ್ಲಿಷ್ ಗಾಗಿ +919444011769
ಹಿಂದಿಗಾಗಿ +91 93858 10496
ತೆಲುಗುಗಾಗಿ +919442493250
www.vmm.org.in
ಈಮೈಲ್:- reachvmm@gmail.com
Android App: https://play.google.com/store/apps/details?id=com.infobells.vmmorgin
ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001
ಪ್ರಾರ್ಥನಾ ಅವಶ್ಯಕತೆಗಾಗಿ :- +919345540482