By Village Missionary Movement
Friday, 21-May-2021ಧೈನಂದಿನ ಧ್ಯಾನ(Kannada) – 21.05.2021
ತೋಟ ಹಾಕಲು ಸೂಚನೆಗಳು
"ವಾಕ್ಯವನ್ನು ಕೇಳಿ ಕೈಕೊಂಡು ಮೂವತ್ತರಷ್ಟಾಗಲಿ ಅರುವತ್ತರಷ್ಟಾಗಲಿ ನೂರರಷ್ಟಾಗಲಿ ಫಲವನ್ನು ಕೊಡುತ್ತಾರೆ; ಇವರೇ ಬೀಜಬಿದ್ದ ಒಳ್ಳೆಯ ನೆಲವಾಗಿರುವವರು..." - ಮಾರ್ಕನು 4:20
ತೋಟವನ್ನು ಹಾಕುವುದಕ್ಕಾಗಿ ಸೂಚನೆಗಳು ತುಂಬಿರುವ ಒಂದು ಪುಸ್ತಕವನ್ನು ಓದಿದ ಒಬ್ಬರಿಗೆ ಒಂದು ಸೂಪರ್ ಪಾಯಿಂಟ್ ಸಿಕ್ಕಿತು. "ಮಣ್ಣಿನ ಬಗ್ಗೆ ಗಮನ ಹರಿಸಿರಿ. ಗಿಡಗಳ ಬಗ್ಗೆ ಚಿಂತಿಸಬೇಕಾದ ಅಗತ್ಯವಿಲ್ಲ. ಮಣ್ಣು ಚೆನ್ನಾಗಿದ್ದರೆ ಬೀಜ ತಾನಾಗಿ ಬೆಳೆದು ಫಲ ಕೊಡುತ್ತದೆ" ಎಂಬುದೇ ಆ ಸೂಚನೆ.
ದೇವರ ವಾಕ್ಯವನ್ನು ಕೇಳಿ, ಅದನ್ನು ಅಂಗೀಕರಿಸಿ, ಅದರಂತೆ ನಡೆದು, ಫಲ ಕೊಡುವವರನ್ನು ಯೇಸುಕ್ರಿಸ್ತನು ಒಳ್ಳೆಯ ನೆಲಕ್ಕೆ ಹೋಲಿಸಿದ್ದಾರೆ. ಒಳ್ಳೆಯ ನೆಲವಾಗಿರುವ ಹೃದಯದಲ್ಲಿ ಹಾಕಲ್ಪಟ್ಟ ವಾಕ್ಯ, ಕ್ರಿಸ್ತನ ಸ್ವಾರೂಪ್ಯವನ್ನು ನಮ್ಮಲ್ಲಿ ರೂಪಿಸುವವರೆಗೂ ಕಾರ್ಯ ಮಾಡುತ್ತದೆ. ವಿಧೇಯತೆಯುಳ್ಳ ಹೃದಯದೊಂದಿಗೆ ದೇವರ ವಾಕ್ಯಗಳನ್ನು ಅಂಗೀಕರಿಸಿದರೆ, ವಾಕ್ಯವು ಬೆಳೆದು ಫಲ ಕೊಡಲು ಪರಿಶುದ್ಧಾತ್ಮನು ಸಹಾಯ ಮಾಡುತ್ತಾರೆ. ಆತ್ಮೀಕ ಜೀವನದಲ್ಲಿ ಬೆಳೆಯಲು, ದೇವರ ವಾಕ್ಯವನ್ನು ಅಂಗೀಕರಿಸಲು ಅದಕ್ಕೆ ವಿಧೇಯರಾಗಲು ನೆಲ ವಾಗಿರುವ ಹೃದಯವನ್ನು ಹದಗೊಳಿಸಬೇಕು. ಆಗ ನಾವು ನೀತಿಯ ಬೆಳೆಯನ್ನು ಕೊಡಲು ಸಾಧ್ಯ.
ನಮ್ಮ ಹೃದಯವು ಎಂತಹ ನೆಲವಾಗಿ ಕಾಣಲ್ಪಡುತ್ತಿದೆ? ಯೋಚಿಸಿ ನೋಡೋಣ. ನಮ್ಮ ಹೃದಯವು ತುಂಬಾ ಕೆಟ್ಟದ್ದಾಗಿದ್ದರೆ, ಕೆಳಕಂಡ ಪ್ರಾರ್ಥನೆಯನ್ನು ಯಥಾರ್ಥವಾದ ಮನಸ್ಸಿನೊಂದಿಗೆ ಮಾಡೋಣ, "ಕರ್ತನೇ ನೀನು ನನ್ನ ಹೃದಯವನ್ನು ಒಳ್ಳೆಯ ನೆಲವಾಗಿ ಮಾರ್ಪಡಿಸುವಂತೆ, ನಾನು ಇರುವ ಸ್ಥಿತಿಯಲ್ಲೇ ನಿಮ್ಮ ಬಳಿ ಸಮರ್ಪಿಸಿಕೊಳ್ಳುತ್ತೇನೆ. ಎಂತಹ ಮನುಷ್ಯನನ್ನಾದರೂ ಮಾರ್ಪಡಿಸಲು ಶಕ್ತಿಯುಳ್ಳ ನಿಮ್ಮ ಸತ್ಯವೇದ ವಾಕ್ಯಗಳನ್ನು ನನ್ನ ಹೃದಯದಲ್ಲಿ ಬಿತ್ತಿರಿ. ವಾಕ್ಯವಾಗಿರುವ ಬೀಜವು ಬೇರೂರಿ ಬೆಳೆಯುವಂತೆ ಮಾಡಿರಿ. ಆ ವಾಕ್ಯಕ್ಕೆ ವಿಧೇಯರಾಗಲು ನನ್ನನ್ನು ಸಮರ್ಪಿಸಿಕೊಳ್ಳುತ್ತೇನೆ. ಆಮೆನ್" ನಂಬಿಕೆಯೊಂದಿಗೆ ಈ ಪ್ರಾರ್ಥನೆಯನ್ನು ಮಾಡಿರಿ. ಖಂಡಿತವಾಗಿಯೂ ಹೃದಯ ವಾಗಿರುವ ನೆಲದಲ್ಲಿ ಕಾಣುತ್ತಿರುವ ಕಠಿಣವಾದ ಕಲ್ಲುಗಳಂತಹ ಸ್ವಭಾವಗಳನ್ನು ಪರಿಶುದ್ಧಾತ್ಮನು ನೀಗಿಸುತ್ತಾರೆ. ಆಳವಾಗಿ ಬೇರೂರಿರುವ ಕಳೆಗಳಂತಿರುವ ಜನ್ಮ ಸ್ವಭಾವಗಳನ್ನು ಕಿತ್ತು ಹಾಕುತ್ತಾರೆ. ಹೆಮ್ಮೆ, ದ್ವೇಷ ಇಂತಹ ಬಂಡೆಗಳನ್ನು ಒಡೆದುಹಾಕುತ್ತಾರೆ.ಪರಿಶುದ್ಧಾತ್ಮನು ಇಬ್ಬನಿ ಹಾಗೆ ಇಳಿದು ಹೃದಯವನ್ನು ನೆನೆಸುತ್ತಾರೆ. ಅವರ ಕೃಪೆಯಾಗಿರುವ ಮಳೆಯನ್ನು ಸುರಿಯುವಂತೆ ಮಾಡುತ್ತಾರೆ. ನೀತಿ ಸೂರ್ಯನು ನಮ್ಮ ಮೇಲೆ ಉದಯಿಸುವಂತೆ ಮಾಡುತ್ತಾರೆ. ನಾವು ಬೆಳೆದು ಫಲ ಕೊಡುವವರಾಗಿ ಮಾರ್ಪಡುತ್ತೇವೆ.
ಪ್ರಿಯರೇ, ಕೀರ್ತನೆಗಳು 1- ನೇ ಅಧ್ಯಾಯದಲ್ಲಿ ಓದುವ ಪ್ರಕಾರ, "ಯೆಹೋವನ ಧರ್ಮಶಾಸ್ತ್ರದಲ್ಲಿ ಆನಂದ ಪಡುವವನಾಗಿ ಅದನ್ನೇ ಹಗಲಿರುಳು ಧ್ಯಾನಿಸುತ್ತಿರುವನೋ ಅವನು ಎಷ್ಟೋ ಧನ್ಯನು. ಅವನು ನೀರಿನ ಕಾಲುವೆಗಳ ಬಳಿಯಲ್ಲಿ ಬೆಳೆದಿರುವ ಮರದ ಹಾಗಿರುವನು. ಅಂಥ ಮರವು ತಕ್ಕ ಕಾಲದಲ್ಲಿ ಫಲಕೊಡುತ್ತದಲ್ಲಾ; ಅದರ ಎಲೆ ಬಾಡುವದೇ ಇಲ್ಲ. ಅದರಂತೆ ಅವನ ಕಾರ್ಯವೆಲ್ಲವೂ ಸಫಲವಾಗುವದು" ಎಂಬ ವಾಗ್ದಾನವು ನಿಮ್ಮದೇ! ಹಲ್ಲೇಲೂಯ!
- Mrs.ಗೀತಾ ರಿಚರ್ಡ್
ಪ್ರಾರ್ಥನಾ ಅಂಶ:-
7000 ಮಿಷನರಿಗಳು, 7000 ಮಿಷನರಿಗಳನ್ನು ಪ್ರೋತ್ಸಾಹಿಸುವ ಪಾಲುದಾರರು, 7000 ಮನೆ ಪ್ರಾರ್ಥನಾ ಗುಂಪುಗಳು ಪ್ರಾರಂಭಿಸಲ್ಪಡುವಂತೆ ಪ್ರಾರ್ಥಿಸೋಣ.
ಈ ದಿನದ ಧ್ಯಾನ ವಾಕ್ಯಕ್ಕಾಗಿ ಇಲ್ಲಿ ಕೆಳಗಿನ ನಂಬರ್ ಗಳನ್ನು ಸಂಪರ್ಕಿಸಿ.
ವಾಟ್ಸಾಪ್.
ತಮಿಳಿಗಾಗಿ +919444011864
ಇಂಗ್ಲಿಷ್ ಗಾಗಿ +919444011769
ಹಿಂದಿಗಾಗಿ +91 93858 10496
ತೆಲುಗುಗಾಗಿ +919442493250
www.vmm.org.in
ಈಮೈಲ್:- reachvmm@gmail.com
Android App: https://play.google.com/store/apps/details?id=com.infobells.vmmorgin
ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001
ಪ್ರಾರ್ಥನಾ ಅವಶ್ಯಕತೆಗಾಗಿ :- +919345540482