By Village Missionary Movement
Saturday, 02-Nov-2024ಧೈನಂದಿನ ಧ್ಯಾನ(Kannada) – 02.11.2024 (Gospel Special)
ಸೇವೆ ಇಲ್ಲದ ಸೇವಕ
"ನಾನು ಸುವಾರ್ತೆಯನ್ನು ಸಾರಿದರೂ ಹೊಗಳಿಕೊಳ್ಳುವದಕ್ಕೆ ನನಗೇನೂ ಆಸ್ಪದವಿಲ್ಲ; ಸಾರಲೇಬೇಕೆಂಬ ನಿರ್ಬಂಧ ನನಗುಂಟು. ಸಾರದಿದ್ದರೆ ನನ್ನ ಗತಿಯನ್ನು ಏನು ಹೇಳಲಿ" - 1 ಕೊರಿಂಥ. 9:16
ಅಕ್ಟೋಬರ್ 2023 ರಲ್ಲಿ, ನಾವು ಶಿವಗಂಗಾ ಮತ್ತು ರಾಮನಾಥಪುರಂ ಜಿಲ್ಲೆಗಳನ್ನು ಕೇಂದ್ರೀಕರಿಸಿ ಸುವಾರ್ತೆ ಸೇವೆಯನ್ನು ಮಾಡಿದೆವು. ಆ ಸಮಯದಲ್ಲಿ ನಮ್ಮ ಬಳಿ ಸಾಕಷ್ಟು ಹಸ್ತಪ್ರತಿಗಳು ಮತ್ತು ಹೊಸ ಒಡಂಬಡಿಕೆ ಇರಲಿಲ್ಲ. ಆದುದರಿಂದ ನಾವು ಪ್ರತಿಗಳಿಗಾಗಿ ಹತ್ತಿರದ ದೊಡ್ಡ ಪಟ್ಟಣದಲ್ಲಿರುವ ಸಭೆಗಳಲ್ಲಿ ನಮಗೆ ಪರಿಚಯವಿರುವ ಜನರನ್ನು ಸಂಪರ್ಕಿಸಿದೆವು. ಆದರೆ ನಾವು ನಿರೀಕ್ಷಿಸಿದಂತೆ ಯಾವುದೇ ಹಸ್ತಪ್ರತಿಗಳು ಅಥವಾ ಹೊಸ ಒಡಂಬಡಿಕೆಗಳು ನಮಗೆ ಸಿಗಲಿಲ್ಲ. ನೂರಾರು ಚರ್ಚುಗಳು ಆ ಪಟ್ಟಣದಲ್ಲಿದ್ದರೂ ಸುವಾರ್ತಾಬೋಧನೆಗೆ ಮೂಲವಾಗಿರುವ ಹಸ್ತಪ್ರತಿಗಳು ಮತ್ತು ಸುವಾರ್ತಾಬೋಧಕ ಪುಸ್ತಕಗಳು ಇಲ್ಲದಿರುವುದು ದುಃಖದ ಸುದ್ದಿಯಾಗಿದೆ.
"ಒಂದು ಮಡಕೆ ಅನ್ನಕ್ಕೆ ಒಂದು ಅನ್ನವನ್ನು ನೋಡಿದರೆ ಸಾಕು". ಎನ್ನುತ್ತಾರೆ. ನಾನು ಇಲ್ಲಿ ಉಲ್ಲೇಖಿಸುತ್ತಿರುವುದು ಕೇವಲ ಒಂದು ನಿರ್ದಿಷ್ಟ ಊರಿನ ಪರಿಸ್ಥಿತಿಯಲ್ಲ; ತಮಿಳುನಾಡಿನಾದ್ಯಂತ ಇದೇ ಪರಿಸ್ಥಿತಿ ಇದೆ. ಇಂದಿನ ಚರ್ಚುಗಳು ಹಳ್ಳಿಗಳಿಗೆ ಹೋಗಿ ಸುವಾರ್ತೆ ಸಾರುವುದನ್ನು ಸಂಪೂರ್ಣವಾಗಿ ಮರೆತಿವೆ ಎಂದು ಹೇಳಬಹುದು. ಇಂದಿಗೂ ಕೆಲವು ಸಭೆಗಳು ಮಾತ್ರ ಗ್ರಾಮ ಸೇವೆ ಮಾಡುತ್ತಿವೆ. ಮತ್ತು ಅನೇಕ ಚರ್ಚುಗಳು ಸುವಾರ್ತಾಬೋಧನೆಯನ್ನು ಮರೆತು ನಿದ್ರಿಸುತ್ತಿವೆ ಎಂದು ನಿಶ್ಚಯವಾಗಿ ಹೇಳಬಹುದು. ಇದು ಇತರ ಸೇವಕರನ್ನೋ, ಸಭೆಗಳನ್ನೋ ಕಡಿಮೆ ಮಾಡಿ ಮಾತಾಡುತ್ತಿದ್ದೇವೆ ಅಥವಾ ಕಡಿಮೆ ಮಾಡುತ್ತಿದ್ದೇವೆ ಅಂತಾ ಅಲ್ಲ. ಇದು ನಿಜವಾದ ಸತ್ಯ.
ಲಿಯೊನಾರ್ಡ್ ರಾವೆನ್ಹಿಲ್ ಅವರು ಸುವಾರ್ತೆ ಸಾರುವುದನ್ನು ನಿಲ್ಲಿಸಿದ ಸಭೆಗಳು ಕ್ರಿಸ್ತನಲ್ಲಿ ಆರೋಗ್ಯಕರ ಬೆಳವಣಿಗೆಯನ್ನು ಕಾಣುವುದಿಲ್ಲ ಎಂದು ಬರೆಯುತ್ತಾರೆ. "ನಾನು ಸುವಾರ್ತೆಯನ್ನು ಬೋಧಿಸದಿದ್ದರೆ ನನಗೆ ಅಯ್ಯೋ" ಎಂದು ಅಪೊಸ್ತಲನಾದ ಪೌಲನು ತನ್ನನ್ನು ತಾನು ತಗ್ಗಿಸಿಕೊಂಡರು, ಆದರೆ ಇಂದಿನ ಸೇವಕರು ಸುವಾರ್ತೆಯನ್ನು ಬೋಧಿಸುವುದನ್ನು ನಿರ್ಲಕ್ಷಿಸುತ್ತಾರೆ ಮತ್ತು ಇತರ ಎಲ್ಲಾ ಸೇವೆಗಳಲ್ಲಿ ತಮ್ಮನ್ನು ತಾವು ಪ್ರಮುಖರು ಎಂದು ತೋರಿಸಿಕೊಳ್ಳುತ್ತಾರೆ," ಎಂದು ಹೇಳಿದರು. ನಿಮ್ಮೆಲ್ಲರ ರಕ್ತಾಪರಾಧಗಳಿಗೆ ನಾನು ಮುಕ್ತನಾಗಿದ್ದೇನೆ ಎಂದು ಹೇಳಿದ ಅಪೊಸ್ತಲನಾದ ಪೌಲನ ಮಾತುಗಳನ್ನು ಇಲ್ಲಿ ನಾವು ನೆನಪಿಸಿಕೊಳ್ಳಬೇಕು.
ಕರ್ತನಾದ ಯೇಸುವಿನ ಮುಖ್ಯ ಆಜ್ಞೆಯಾದ "ಸಕಲ ಸೃಷ್ಟಿಗೆ ಸುವಾರ್ತೆಯನ್ನು ಸಾರಿರಿ" ಎಂಬ ಮಾತನ್ನು ಎಲ್ಲಾ ಸಭೆಗಳು ತಮ್ಮ ಹತೋಟಿಗೆ ತೆಗೆದುಕೊಂಡು ಗ್ರಾಮ ಸೇವೆಯನ್ನು ಮಾಡಬೇಕೆಂದು ನಾವು ಪ್ರಾರ್ಥಿಸಬೇಕು. ಇತರರು ರಕ್ಷಣೆ ಹೊಂದಬೇಕು ಎಂದು ನಾವು ಪ್ರಾರ್ಥಿಸುವ ಅದೇ ಸಮಯದಲ್ಲಿ, ಸುವಾರ್ತಾಬೋಧಕ ಸೇವೆಯನ್ನು ಮರೆತಿರುವ ಸಭೆಗಳು ಮತ್ತು ಸೇವಕರು ಸೇವೆ ಮಾಡಲು ಎದ್ದೇಳಬೇಕೆಂದು ಪ್ರಾರ್ಥಿಸಬೇಕು. ಸುವಾರ್ತೆಯನ್ನು ಸಾರದ ಸೇವಕರಿಗೂ ಮತ್ತು ಸಭೆಗಳಿಗೂ ಅಯ್ಯೋ ಎಂದು ಸತ್ಯವೇದದಲ್ಲಿ ಬರೆದಿರುವುದನ್ನು ಎಂದಿಗೂ ಮರೆಯಬೇಡಿ. ದೇವರು ನಮಗೆ ಸಹಾಯ ಮಾಡಲಿ.
- Bro. ಜೇಕಬ್ ಶಂಕರ್
ಪ್ರಾರ್ಥನಾ ಅಂಶ:
25000 ಹಳ್ಳಿಗಳಿಗೆ ಭೇಟಿ ನೀಡುವ ನಮ್ಮ ಯೋಜನೆಯಲ್ಲಿ ನಾವು ಭೇಟಿಯಾಗುವ ಮಕ್ಕಳಿಗಾಗಿ ಪ್ರಾರ್ಥಿಸಿರಿ.
*Whatsapp*
ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.
www.vmm.org.in
ಈಮೈಲ್:- info@vmm.org.in
Android App: https://play.google.com/store/apps/details?id=com.infobells.vmmorgin
ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001
ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482