By Village Missionary Movement
Monday, 30-Sep-2024ಧೈನಂದಿನ ಧ್ಯಾನ(Kannada) – 30.09.2024
ಹಿಂತಿರುಗಿ ನೋಡಬೇಡ
"…ನೇಗಿಲಿನ ಮೇಲೆ ತನ್ನ ಕೈಯನ್ನಿಟ್ಟು ಹಿಂದಕ್ಕೆ ನೋಡುವವನು ದೇವರ ರಾಜ್ಯಕ್ಕೆ ತಕ್ಕವನಲ್ಲ ಅಂದನು" - ಲೂಕ 9:62
ಡಾ. ಚಾರ್ಲ್ಸ್ ಲ್ಯಾಂಬಿ ಸುಡಾನ್ನಲ್ಲಿ ವೈದ್ಯಕೀಯ ಮಿಷನರಿಯಾಗಿ ಕೆಲಸ ಮಾಡಿದವರು. ಅವರು 1917 ರಲ್ಲಿ ತಮ್ಮ ಸ್ವಂತ ದೇಶವಾದ ಅಮೆರಿಕಕ್ಕೆ ಹೋದರು. ಅಲ್ಲಿ ತಮ್ಮ ಹತ್ತಿರದ ಸಂಬಂಧಿ ಚಾರ್ಲ್ಸ್ ಲ್ಯಾಂಬಿಯನ್ನು ಸುಡಾನ್ ಗೆ ಹಿಂತಿರುಗಿ ಹೋಗದೇ ಅಮೆರಿಕದಲ್ಲೇ ಉಳಿಯುವಂತೆ ಮನವೊಲಿಸಿದರು. ಸುಡಾನ್ನಲ್ಲಿ ಕಷ್ಟಪಟ್ಟು ದುಡಿಯುವುದು ಸಾಕು, ಇಲ್ಲೇ ಇರಿ ಮತ್ತು ನನ್ನ ಆಸ್ಪತ್ರೆಯಲ್ಲಿ ನನ್ನೊಂದಿಗೆ ಕೆಲಸ ಮಾಡಿ. ಇನ್ನು ಕೆಲವೇ ವರ್ಷಗಳಲ್ಲಿ ನನ್ನ ಆಸ್ಪತ್ರೆಯನ್ನು ನಿಮಗೆ ನೀಡುತ್ತೇನೆ ಎಂದರು. ಈ ಅಪರೂಪದ ಅವಕಾಶವನ್ನು ಕಳೆದುಕೊಳ್ಳಬೇಡಿ. ಚಾರ್ಲ್ಸ್ ಗೆ ಒಂದೇ ಗೊಂದಲ. ಅವರು ಮಿಷನರಿಗಳಿಗಾಗಿ ನಡೆದ ಸಭೆಯಲ್ಲಿ ಭಾಗವಹಿಸಿದ್ದರು. ಗೊಂದಲ ಬದಲಾಗಲಿಲ್ಲ. ದೈಹಿಕ ಆಯಾಸದಿಂದ ಅವರು ನಿದ್ರೆಗೆ ಜಾರಿದರು. ಆಗ ಅವರಿಗೆ ಒಂದು ಕನಸು ಬಿತ್ತು. ಅದರಲ್ಲಿ ಈಶಾನ್ಯ ಆಫ್ರಿಕಾದ ನಕ್ಷೆಯಿಂದ ಕುಷ್ಠರೋಗದ ಕೈ ಅವರ ಕಡೆಗೆ ಬಂದಿತು. ನಾನು ಈ ಕೈ ಹಿಡಿಯಲಾ? ಎಂದು ಬೇಕಾಬಿಟ್ಟಿಯಾಗಿ ಹಿಡಿದರು. ಆಗ ಅದು ಮೊಳೆ ಹೊಡೆಯಲ್ಪಟ್ಟ ಯೇಸುವಿನ ಕೈಯಾಗಿ ಮಾರ್ಪಟ್ಟಿತು. ತಕ್ಷಣ ಸುಡಾನ್ನಲ್ಲಿ ಸೇವೆ ಮಾಡಲು ದೇವರು ನನ್ನನ್ನು ಕರೆಯುತ್ತಿದ್ದಾರೆ ಎಂದು ಹೇಳಿ ಸುಡಾನ್ಗೆ ಸೇವೆ ಮಾಡಲು ಹೋದರು.
ಜೀವನದ ಯಾವುದೋ ಒಂದು ಹಂತದಲ್ಲಿ ನಮಗೆ ಬರುವ ಜನರ ಮಾತುಗಳು ಮತ್ತು ಸನ್ನಿವೇಶಗಳು ನಮ್ಮನ್ನು ಸುಲಭವಾಗಿ ಹಿಂಜಾರುವಂತೆ ಮಾಡುವುದು ಮನುಷ್ಯರಾದ ನಮ್ಮ ಸ್ವಭಾವ. ದೇವರನ್ನು ಹಿಂಬಾಲಿಸಿದ ಶಿಷ್ಯನಾದ ಪೇತ್ರನ ಬಳಿ, "ಈ ಬಂಡೆಯ ಮೇಲೆ ನಾನು ನನ್ನ ಸಭೆಯನ್ನು ಕಟ್ಟುತ್ತೇನೆ" ಎಂದು ಹೇಳಿದ್ದರೂ ಯೇಸು ಸತ್ತ ನಂತರ ಅವರು ಮೀನುಗಾರಿಕೆಗೆ ಹೋದರು. ಆಗ ದೇವರಿಗೆ ದೊಡ್ಡ ಮೋಸ. ಆದರೆ ಹಿಂತಿರುಗುವುದನ್ನು ಬಯಸದ ದೇವರು ಅಲ್ಲಿಗೆ ಬಂದು 153 ದೊಡ್ಡ ಮೀನುಗಳನ್ನು ಹಿಡಿಯುವಂತೆ ಮಾಡಿದರು. ಎಲೀಯನು ಸಹ ಯೆಜೆಬೆಲಳ ಮಾತಿಗೆ ಹೆದರಿ ತನ್ನ ಕೆಲಸವನ್ನು ಬಿಟ್ಟು ಒಬ್ಬಂಟಿಯಾಗಿ ಹಿಂತಿರುಗಿ ಹೋಗಿ ಬಿಡೋಣ ಅಥವಾ ಸಂಪೂರ್ಣವಾಗಿ ಪ್ರಾಣ ಬಿಟ್ಟು ಬಿಡೋಣ ಎಂದು ಕರ್ತನ ಮುಂದೆ ನಿಂತ ಎಲೀಯ ಅವರ ಪಾದವನ್ನು ಬಿಟ್ಟು ಓಡಿದರು. ಅಲ್ಲಿಯೂ ದೇವರು ಒಬ್ಬ ದೇವದೂತನನ್ನು ಕಳುಹಿಸಿ ಮಾತನಾಡಿದರು. ಅವರ ಮೂಲಕ ಮಾಡಲಿರುವ ಯೋಜನೆಯನ್ನು ಹೇಳಿ ಸಂತೈಸಿದರು.
ಪ್ರಿಯರೇ, ನೀವು ಮಾಡುತ್ತಿರುವ ಕೆಲಸ, ವ್ಯಾಪಾರ, ಪದವಿ ಇದ್ಯಾವುದೂ ನೀವಾಗಿ ಹುಡುಕಿಕೊಂಡಿದ್ದಲ್ಲ, ದೇವರೇ ಅದನ್ನು ನಿಮಗೆ ಕೊಟ್ಟಿದ್ದಾರೆ. ಇವುಗಳಿಗೆ ಸತ್ಯವಾಗಿರಿ. ಅರ್ಧಕ್ಕೆ ಬಿಡಬೇಡಿ. ನಿರಾಶೆ ಮತ್ತು ಸೋಲು ಬಂದಂತೆ ತೋರಿದರೂ, ನೀವು ನಿಜವಾಗಿದ್ದಾಗ, ನಾವು ಪ್ರಾರ್ಥಿಸುವುದಕ್ಕಿಂತ ಮತ್ತು ಯೋಚಿಸುವುದಕ್ಕಿಂತ ಹೆಚ್ಚಿನದನ್ನು ಮಾಡುವ ದೇವರು ಅದೇ ರೀತಿ ಮಾಡುತ್ತಾರೆ ಮತ್ತು ನಮ್ಮನ್ನು ಅನೇಕರಿಗೆ ಉಪಯುಕ್ತವಾಗಿ ಮಾರ್ಪಡಿಸುತ್ತಾರೆ ಎಂಬುದು ಹೆಚ್ಚು ಖಚಿತ. ನಿಮ್ಮ ಕೆಲಸದ ಸ್ಥಳದಲ್ಲಿ ಮನೆಯ ಹತ್ತಿರ ನೀವು ಮಾಡುವ ಸೇವೆಯನ್ನು ಮಾಡಿ, ಎಷ್ಟೇ ಚಿಕ್ಕದಾದರೂ, ನಿರುತ್ಸಾಹಗೊಳ್ಳದೆ ಹಿಂಜಾರಿಹೋಗದೇ ಮಾಡಿರಿ. ನಿಷ್ಠೆಯಿಂದ ಮಾಡಿದಾಗ ಸಣ್ಣ ಸೇವೆಯನ್ನು ಸಹ ದೇವರು ಆಶೀರ್ವದಿಸಿ ಹೆಚ್ಚಿಸುತ್ತಾರೆ.
- ಅನ್ಬುಜ್ಯೋತಿ ಸ್ಟಾಲಿನ್
ಪ್ರಾರ್ಥನಾ ಅಂಶ:
ಛತ್ತೀಸ್ ಗಢ ದಲ್ಲಿರುವ ನಮ್ಮ ಸೇವಕರ ಕುಟುಂಬಕ್ಕಾಗಿ ಪ್ರಾರ್ಥಿಸಿರಿ.
*Whatsapp*
ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.
www.vmm.org.in
ಈಮೈಲ್:- info@vmm.org.in
Android App: https://play.google.com/store/apps/details?id=com.infobells.vmmorgin
ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001
ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482