Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 19.08.2024
Share:

By Village Missionary Movement

Monday, 19-Aug-2024

ಧೈನಂದಿನ ಧ್ಯಾನ(Kannada) – 19.08.2024

 

ಪೇತ್ರನ ಪರಿವರ್ತನೆ

 

"ಆ ಹೆಸರಿನಿಂದಲೇ ಹೊರತು… ಬೇರೆ ಯಾವ ಹೆಸರಿನಿಂದಲೂ ನಮಗೆ ರಕ್ಷಣೆಯಾಗುವದಿಲ್ಲ…" - ಅಪೊಸ್ತಲ 4:12

  

ಪೇತ್ರನ ಬಗ್ಗೆ ನಾವು ಯೋಚಿಸಿದಾಗ ಮನಸ್ಸಿಗೆ ಬರುವ ಮೊದಲ ವಿಷಯವೆಂದರೆ ಅವರು ಮೂರು ಬಾರಿ ನಿರಾಕರಿಸಿದರು ಎಂಬುದೇ. ಆದರೆ ಅದು ಅವರು ಪರಿಶುದ್ಧಾತ್ಮನಿಂದ ತುಂಬಿಸಲ್ಪಡುವುದಕ್ಕಿಂತ ಮೊದಲು! ಸೇವಕರು ಯೇಸುವನ್ನು ಬಂಧಿಸಿ ಪ್ರತಿ ಮುಖ್ಯ ಯಾಜಕರು, ಸದ್ದುಕಾಯರು ಮತ್ತು ಹಿರಿಯರ ಬಳಿಗೆ ಕರೆದುಕೊಂಡು ಹೋದಾಗಲೂ ಗಲಿಬಿಲಿಯಿಂದ ಹಿಂಬಾಲಿಸಿದರು. ಸೆರೆಮನೆಯಲ್ಲೂ ಮತ್ತು ಮರಣದಲ್ಲೂ, ನಿಮ್ಮನ್ನು ಹಿಂಬಾಲಿಸುತ್ತೇನೆ,... ನಿಮ್ಮ ಸಲುವಾಗಿ ಎಲ್ಲರೂ ಎಡವಿದರೂ, ನಾನು ಎಡವುವದಿಲ್ಲ ಎಂದವರು, ಯೇಸುಕ್ರಿಸ್ತನು "ನೀನು ನನ್ನನ್ನು ಮೂರು ಬಾರಿ ನಿರಾಕರಿಸುವೆ" ಎಂದು ಹೇಳಿದ ನಂತರವೂ ತಿರಸ್ಕರಿಸುವುದಿಲ್ಲ ಎಂದು ದೃಢವಾಗಿ ಹೇಳಿದರು. ಇವೆಲ್ಲವೂ ಪೇತ್ರನು ತನ್ನ ಸ್ವಂತ ಶಕ್ತಿಯಿಂದ ಹೇಳಿದ ಮಾತುಗಳು. ಪಂಚಾಶತ್ತಮದ ದಿನದಂದು, 120 ಜನರು ಮೇಲಂತಸ್ತಿನಲ್ಲಿ ಕಾದಿದ್ದಾಗ ಪವಿತ್ರಾತ್ಮದಿಂದ ತುಂಬಿಸಲ್ಪಟ್ಟವರಾಗಿ ಅನ್ಯಭಾಷೆಗಳಲ್ಲಿ ಮಾತನಾಡಿದರು. ಇದನ್ನು ಕೇಳಿದ ಅನೇಕ ಸ್ಥಳೀಯರು ತಮ್ಮದೇ ಭಾಷೆಯನ್ನು ಕೇಳಿ ಆಶ್ಚರ್ಯಪಟ್ಟರು, ಆದರೆ ಕೆಲವರು ಕುಡಿದು ಹುಚ್ಚರಾಗಿದ್ದಾರೆ ಎಂದು ತಮಾಷೆ ಮಾಡಿದರು. ಪೇತ್ರನು ಧೈರ್ಯದಿಂದ ಎದ್ದುನಿಂತು, "ಎಲ್ಲಾ ಮನುಷ್ಯರ ಮೇಲೆ ನನ್ನ ಆತ್ಮವನ್ನು ಸುರಿಸುವೆನು" ಎಂಬ ಪ್ರವಾದನೆಯ ಮಾತು ನೆರವೇರಿತು. ನೀವು ಯೇಸುವನ್ನು ಕೊಂದಿದ್ದೀರಿ, ಆದರೆ ದೇವರು ಅವರನ್ನು ಜೀವಂತವಾಗಿ ಎಬ್ಬಿಸಿದರು ಎಂದು ಧೈರ್ಯವಾಗಿ ಹೇಳಿದರು. ಈ ಬದಲಾವಣೆ ಹೇಗೆ ಬಂತು?

 

ಪವಿತ್ರಾತ್ಮದ ಅಭಿಷೇಕವನ್ನು ಸ್ವೀಕರಿಸಿದ ನಂತರವೇ ಈ ಸತ್ಯವೇದ ವಾಕ್ಯಗಳ ಜ್ಞಾನ ಮತ್ತು ಧೈರ್ಯವು ಪೇತ್ರನಿಗೆ ಉಂಟಾಯಿತು! ಪೇತ್ರ ಮತ್ತು ಯೋಹಾನರು ಆಲಯದ ಬಾಗಿಲಲ್ಲಿ ಹುಟ್ಟು ಕುಂಟನನ್ನು ಯೇಸುವಿನ ಹೆಸರಿನಲ್ಲಿ ಎದ್ದು ನಡೆಯುವಂತೆ ಮಾಡಿದಾಗ, ನಮ್ಮ ಸ್ವಂತ ಶಕ್ತಿಯಾಗಲಿ, ಸ್ವಂತ ಭಕ್ತಿಯಾಗಲಿ ಅವನಿಗೆ ಸ್ವಸ್ಥತೆಯನ್ನು ನೀಡಲಿಲ್ಲ, ಆದರೆ ಯೇಸುವಿನ ನಾಮವು ಅವನಿಗೆ ಶಾಶ್ವತ ಪರಿಹಾರವನ್ನು ನೀಡಿತು ಎಂದು ಹೇಳಿದರು. ಅಧಿಕಾರಿಗಳು, ಮಹಾಯಾಜಕರು ಮತ್ತು ಹಿರಿಯರ ಸಮ್ಮುಖದಲ್ಲಿ ಅವರು ಧೈರ್ಯದಿಂದ ಯೇಸುವಿನ ಹೆಸರನ್ನು ಹೇಳಿದರು. ಪೇತ್ರನ ಮಾತುಗಳನ್ನು ಕೇಳಿ 3000, 5000 ಜನರು ಯೇಸುವನ್ನು ಸ್ವೀಕರಿಸಿದರು. ಯೆಹೂದ್ಯರು ಅನ್ಯಜನರೊಂದಿಗೆ ಬೆರೆಯದಿದ್ದರೂ, ಪೇತ್ರನು ಕೊರ್ನೇಲಿಯನ ಮನೆಗೆ ಹೋಗಿ ಸುವಾರ್ತೆಯನ್ನು ಸಾರಿದರು, ಇದರಿಂದ ಅನ್ಯಜನರು ಪವಿತ್ರಾತ್ಮದ ತುಂಬುವಿಕೆಯನ್ನು ಪಡೆಯಲು, ಸತ್ತ ದೊರ್ಕಳು ಜೀವವನ್ನು ಪಡೆಯಲು, ಎಂಟು ವರ್ಷಗಳಿಂದ ಪಾರ್ಶ್ವವಾಯು ಆಗಿದ್ದ ಐನಿಯಾನನ್ನು ಗುಣಪಡಿಸಿದರು. 

  

ಹೌದು ಪ್ರಿಯರೇ! ನಿರಾಕರಿಸಿದ ಪೇತ್ರನು ಬಹುದೊಡ್ಡ ಅಪೊಸ್ತಲನಾದನು ಮತ್ತು ಅನ್ಯಜನರಿಗೆ ರಕ್ಷಣೆಯನ್ನು ಹೊತ್ತು ತಂದರು. ಇನ್ನು ಮುಂದೆ ತಿರಸ್ಕರಿಸಿದ ಪೇತ್ರನಂನಂತಹ ಯಾರನ್ನೂ ನಿರ್ಲಕ್ಷಿಸದೆ, ದುರ್ಬಲರನ್ನು ಮತ್ತು ಕೊರತೆಯುಳ್ಳವರನ್ನು ದೇವರು ಪವಿತ್ರಾತ್ಮದಿಂದ ತುಂಬಿ ಎಷ್ಟು ಶಕ್ತಿಯುತವಾಗಿ ಸೇವೆ ಮಾಡಲು ಉಪಯೋಗಿಸಿದರು ಎಂದು ಯೋಚಿಸಿ ಸ್ತುತಿಸಿರಿ. ನಾವು ಎಷ್ಟೇ ದುರ್ಬಲರಾಗಿದ್ದರೂ ದೇವರು ನಮ್ಮನ್ನು ಉಪಯೋಗಿಸಲು ಸಾಧ್ಯ. ಎಲ್ಲರನ್ನೂ ಕ್ರಿಸ್ತನಲ್ಲಿ ಘನವಾದವರೆಂದು ಭಾವಿಸೋಣ.

- Mrs. ಭುವನಾ ಧನಪಾಲನ್

 

ಪ್ರಾರ್ಥನಾ ಅಂಶ:

ಕಣ್ಮಣಿಯೇ ಕೇಳ್ ಎಂಬ ಯೌವನಸ್ಥ ಮಕ್ಕಳ ಕಾರ್ಯಕ್ರಮದ ಮೂಲಕ ಅನೇಕ ಹದಿಹರೆಯದ ಹುಡುಗಿಯರು ದೇವರ ಪ್ರೀತಿಯನ್ನು ಸವಿಯುವಂತೆ ಮತ್ತು ರಕ್ಷಣೆ ಹೊಂದುವಂತೆ ಪ್ರಾರ್ಥಿಸಿರಿ.

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- info@vmm.org.in

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482



hacklink satın al