Village Missionary Movement

கிராம மிஷனரி இயக்கம்


ಧೈನಂದಿನ ಧ್ಯಾನ(Kannada) – 12.04.2025

ಧೈನಂದಿನ ಧ್ಯಾನ(Kannada) – 12.04.2025

 

ನೀವು ಯಾರು?

 

"ಮನುಷ್ಯರಲ್ಲಿ ತನ್ನ ಸಾನ್ನಿಧ್ಯವನ್ನು ಅಪೇಕ್ಷಿಸುವ ಬುದ್ಧಿವಂತರು ಇದ್ದಾರೋ ಎಂದು ಯೆಹೋವನು ಆಕಾಶದಿಂದ ಮನುಷ್ಯರನ್ನು ನೋಡಲಾಗಿ" - ಕೀರ್ತನೆ 14:2

 

ನೀವು ಯಾರು? ಎಂದು ಕೇಳಿದರೆ ಅದರ ಅರ್ಥವೇನೆಂದು ಕೇಳುತ್ತಿದ್ದಾರೆಯೇ? ಈ ರೀತಿ ಕೇಳಿದರೆ, ನಿಮ್ಮ ಹೆಸರನ್ನೋ, ಅಥವಾ ನೀವು ಮಾಡುವ ಕೆಲಸವನ್ನೋ, ನಿಮ್ಮ ಸ್ಥಾನವನ್ನೋ ಹೇಳುತ್ತೀರ ಹಾಗೆ ತಾನೇ, ಸರಿ ಇರಲಿ. ಈಗ ನಾವು ಸತ್ಯವೇದದಲ್ಲಿರುವ ಜನರಿಗೆ ನಮ್ಮನ್ನು ಹೋಲಿಸಿನೋಡಿ ನಾವು ಯಾರಾಗಿದ್ದೇವೆ ಎಂಬುದನ್ನು ಯೋಚಿಸೋಣ!

 

ಪರಿಶುದ್ಧ ಗ್ರಂಥದಲ್ಲಿ, ಹನ್ನ ಮತ್ತು ಪೆನಿನ್ನ ಎಂಬ ಇಬ್ಬರು ವ್ಯಕ್ತಿಗಳನ್ನು ನಾವು ನೋಡುತ್ತೇವೆ. ಪೆನಿನ್ನಳಿಗೆ ಮಕ್ಕಳಿದ್ದರು. ಹನ್ನಳಿಗೆ ಮಕ್ಕಳಿಲ್ಲ. ಹಾಗಾಗಿ ಪೆನಿನ್ನಳು ಹನ್ನಳಿಗೆ ದೊಡ್ಡ ತೊಂದರೆ ಕೊಡುವವಳಾಗಿ ಕಾಣುತ್ತಿದ್ದಳು. ಹನ್ನಳು ಯಾವಾಗಲೂ ಅಳುತ್ತಿದ್ದಳು. ಆದರೆ ಸತ್ಯವೇದದಲ್ಲಿ ಎಲ್ಲಿಯೂ ಹನ್ನಳು ಪೆನಿನ್ನಳೊಂದಿಗೆ ಜಗಳವಾಡಿದ ಬಗ್ಗೆ ಅಥವಾ ಬೇರೆಯವರ ಮೇಲೆ ದೂರು ನೀಡಿದ ಬಗ್ಗೆ ದಾಖಲಾಗಿಲ್ಲ. ಆದರೆ ಹನ್ನಳು ತನ್ನ ಹೃದಯವನ್ನು ದೇವರ ಮುಂದೆ ಸುರಿದು ಪ್ರಾರ್ಥಿಸಿದಳು. ಆಕೆಯ ವಿಜ್ಞಾಪಣೆಯು ಕೇಳಲ್ಪಟ್ಟಿತು. ಅವಳು ಸಮುವೇಲನೆಂಬ ಪ್ರವಾದಿಗೆ ಜನ್ಮ ನೀಡಿದಳು. ಅಷ್ಟೇ ಅಲ್ಲ, ಅವಳಿಗೆ ಇನ್ನೂ ಹೆಚ್ಚು ಮಕ್ಕಳಿದ್ದರು ಎಂದು ನಾವು ಓದುತ್ತೇವೆ. ನಮ್ಮ ಕುಟುಂಬದಲ್ಲಿ ನಾವು ಹನ್ನಳಂತ ಸ್ವಭಾವವುಳ್ಳವರಾಗಿ ಇದ್ದೇವಾ? ಅಥವಾ ಪೆನಿನ್ನಳ ಹಾಗೆ ಇದ್ದೇವಾ? ನಾವು ಯಾರು? ಎಂದು ಯೋಚಿಸೋಣ.   

 

ಇನ್ನೂ ಸತ್ಯವೇದದಲ್ಲಿ ಅನೇಕರನ್ನು ಹೇಳಬಹುದು. ಏಶಾವನು, ಯಾಕೋಬ, ಇಸಾಕ, ದಾವೀದ ಮತ್ತು ಸೌಲರನ್ನು ಒಳಗೊಂಡಂತೆ ಅನೇಕ ಜನರನ್ನು ಪರಿಶೀಲಿಸಬಹುದು. ಕೆಲವರು ತಮ್ಮ ಹೆಸರಿಗೆ ತಕ್ಕಂತೆ ಬದುಕುವುದಿಲ್ಲ, ಇನ್ನು ಕೆಲವರ ಜೀವನ ಉತ್ತಮವಾಗಿರುತ್ತದೆ. ಆದರೆ ಅವರ ಹೆಸರುಗಳು ಚೆನ್ನಾಗಿರುವುದಿಲ್ಲ.

 

ಇದನ್ನು ಓದುತ್ತಿರುವ ಪ್ರಿಯರೇ! ನಾವು ಇತರರ ಗುಣಲಕ್ಷಣಗಳನ್ನು ಬದಲಾಯಿಸಲು ಸಾಧ್ಯವಿಲ್ಲ. ಆದರೆ ನಾವು ನಮ್ಮನ್ನು ಬದಲಾಯಿಸಿಕೊಳ್ಳಬಹುದು. ನಾವು ಮತ್ತೊಬ್ಬರನ್ನು ನ್ಯಾಯವಿಚಾರಿಸುವವರಾಗಿಯೂ ಇರಬಾರದು. ನಮ್ಮನ್ನು ನಾವೇ ನ್ಯಾಯ ವಿಚಾರಿಸಿಕೊಂಡರೆ, ನಾವು ಯಾರೆಂದು ಯೋಚಿಸಲು ನಮಗೆ ಅವಕಾಶವಿರುತ್ತದೆ. ನಾವು ಯಾರಾಗಿದ್ದೇವೆ ಎಂಬುದನ್ನು ಯೋಚಿಸೋಣ. ನಮ್ಮಲ್ಲಿ ಪ್ರತಿಯೊಬ್ಬರೂ ದೇವರ ಪ್ರತಿರೂಪದಲ್ಲಿ ಸೃಷ್ಟಿಸಲ್ಪಟ್ಟಿದ್ದೇವೆ. ಆದ್ದರಿಂದ, ನಮ್ಮೊಳಗೆ ದೇವರ ಗುಣಲಕ್ಷಣಗಳು ಇರಬೇಕು. ದೇವರಿಂದ ಸೃಷ್ಟಿಸಲ್ಪಟ್ಟ ನಮ್ಮಲ್ಲಿ ಪ್ರತಿಯೊಬ್ಬರೂ ವಿಶೇಷವಾದವರು. ಯಾರನ್ನಾದರೂ ಹೆಚ್ಚಿಸಲು ಮತ್ತು ಬಲಪಡಿಸಲು ದೇವರಿಗೆ ಸಾಧ್ಯ. ಆದ್ದರಿಂದ ನಮ್ಮನ್ನು ಮೇಲಕ್ಕೆತ್ತುವವರೆಗೂ ಆತನ ಬಲವಾದ ಕೈಯಲ್ಲಿ ತಗ್ಗಿಸಿಕೊಂಡಿರಲು, ವಿಧೇಯರಾಗಿರಲು ಇಂದೇ ಆರ್ಪಿಸೋಣ.

- R. ರಾಮ್‌ಕುಮಾರ್

 

ಪ್ರಾರ್ಥನಾ ಅಂಶ:

38 ಜಿಲ್ಲೆಗಳಲ್ಲಿಯೂ ತೋಳುಕೊಡುವ ಸೇವಕರು ಎದ್ದೇಳುವಂತೆ ಪ್ರಾರ್ಥಿಸಿರಿ.

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- info@vmm.org.in

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482


Comment As:

Comment (0)