Village Missionary Movement

கிராம மிஷனரி இயக்கம்


ಧೈನಂದಿನ ಧ್ಯಾನ(Kannada) – 11.04.2025

ಧೈನಂದಿನ ಧ್ಯಾನ(Kannada) – 11.04.2025

 

ಪರೀಕ್ಷಿಸಿ ತಿಳಿದಿರುವ ದೇವರು

 

"ಯೆಹೋವನೇ, ನೀನು ನನ್ನನ್ನು ಪರೀಕ್ಷಿಸಿ ತಿಳುಕೊಂಡಿದ್ದೀ" - ಕೀರ್ತನೆ 139:1

 

ಒಂದು ದಿನ ಯೇಸುಕ್ರಿಸ್ತನು ದೇವಾಲಯಕ್ಕೆ ಹೋಗಿ ತನ್ನ ಕಣ್ಣುಗಳನ್ನೆತ್ತಿ ನೋಡಿದಾಗ ಶ್ರೀಮಂತರು ತಮ್ಮ ಕಾಣಿಕೆಗಳನ್ನು ಕಾಣಿಕೆ ಪೆಟ್ಟಿಗೆಯಲ್ಲಿ ಹಾಕುವುದನ್ನು ಕಂಡರು. ಒಬ್ಬ ಬಡ ವಿಧವೆಯೂ ತನ್ನ ಕಾಣಿಕೆಯನ್ನು ಹಾಕಿದಳು. ಅವಳು ತನ್ನಲ್ಲಿದ್ದ ಎರಡು ನಾಣ್ಯಗಳನ್ನು ಮಾತ್ರ ಹಾಕಿದಳು. ಆದರೆ ಬೇರೆ ಎಲ್ಲರಿಗಿಂತ ಹೆಚ್ಚು ಹಾಕಿದಳು ಎಂಬ ಪ್ರಶಂಸೆಯನ್ನು ಪಡೆದಳು.   

 

ಅಪೊಸ್ತಲರ ಕಾಲದಲ್ಲಿ, ಅನನೀಯ ಮತ್ತು ಸಪ್ಫೈರ ತಮ್ಮ ಆಸ್ತಿಯನ್ನು ಮಾರಿ, ಬಂದ ಹಣದಲ್ಲಿ ಒಂದು ಭಾಗವನ್ನು ತಮ್ಮ ಬಳಿ ಇಟ್ಟುಕೊಂಡು, ಉಳಿದದ್ದನ್ನು ಅಪೊಸ್ತಲರ ಪಾದಗಳ ಬಳಿ ಇಟ್ಟರು. ಜಮೀನನ್ನು ಇಷ್ಟೇ ಬೆಲೆಗೆ ಮಾರಿದ್ದೀರಾ ಎಂದು ಪೇತ್ರನು ಕೇಳಿದಾಗ, ಸಫೈರಳು ಸುಳ್ಳು ಹೇಳಿ ಶಿಕ್ಷೆಯನ್ನು ಪಡೆದಳು. ಆತನು ಪ್ರತಿಮನುಷ್ಯನ ಆಂತರ್ಯವನ್ನು ತಿಳಿದವನಾದ ಕಾರಣ ಯಾವನೂ ಯಾವ ಮನುಷ್ಯನ ವಿಷಯದಲ್ಲಿಯೂ ಆತನಿಗೆ ಸಾಕ್ಷಿ ಕೊಡಬೇಕಾದ ಅವಶ್ಯವಿರಲಿಲ್ಲ. (ಯೋಹಾನ 2:24, 25)

 

ದೇವರು ನಮ್ಮ ಕಷ್ಟಗಳನ್ನು ಮತ್ತು ನಮ್ಮ ಆತ್ಮಗಳ ವೇದನೆಯನ್ನು ತಿಳಿದಿದ್ದಾರೆ. ನಾವು ಅನುಭವಿಸುವ ನಿಂದೆ ಮತ್ತು ಅವಮಾನ ಅವರಿಗೆ ತಿಳಿದಿದೆ. ನಮ್ಮ ಮೂರ್ಖತನ ಮತ್ತು ದೌರ್ಬಲ್ಯ ಅವರಿಗೆ ತಿಳಿದಿದೆ. ನಾವು ಮಾತನಾಡುವ ಮೊದಲೇ ಅವರಿಗೆ ನಮ್ಮ ಮಾತುಗಳು ತಿಳಿದಿರುತ್ತವೆ. ನಮ್ಮ ಹೃದಯಗಳನ್ನು ಪರೀಕ್ಷಿಸಿ ತಿಳಿದಿರುವ ದೇವರ ಕಣ್ಣುಗಳಿಂದ ಯಾವುದೂ ತಪ್ಪಿಸಿಕೊಳ್ಳುವುದಿಲ್ಲ. ಆತನ ಕಣ್ಣುಗಳಿಗೆ ಏನೂ ಮರೆಮಾಡಲ್ಪಟ್ಟಿಲ್ಲ. ದೇವರಿಗೆ ಎಲ್ಲವೂ ತಿಳಿದಿದೆ. ದೇವರು ನಮ್ಮ ಎಲ್ಲಾ ನೆನಪುಗಳು ಮತ್ತು ಆಲೋಚನೆಗಳ ಬಗ್ಗೆ ಸಂಪೂರ್ಣವಾಗಿ ತಿಳಿದಿರುವುದು ಮಾತ್ರವಲ್ಲದೆ, ನಮಗೆ ನೀಡಲಾದ ಜವಾಬ್ದಾರಿಗಳು ಮತ್ತು ಕರ್ತವ್ಯಗಳಲ್ಲಿ ನಾವು ಎಷ್ಟು ನಂಬಿಗಸ್ತರಾಗಿದ್ದೇವೆ ಮತ್ತು ಎಷ್ಟು ನಂಬಿಗಸ್ತರಾಗಿದ್ದೆವು ಎಂಬುದು ಸಹ ಆತನಿಗೆ ತಿಳಿದಿದೆ. ನಮಗೆ ಎಷ್ಟೇ ಹಣ ಅಥವಾ ಸ್ಥಾನಮಾನವಿದ್ದರೂ, ನಾವು ಕರ್ತನನ್ನು ಪ್ರೀತಿಸಿ, ಆತನ ಸಂಬಂಧದಲ್ಲಿ ಆನಂದಿಸಿ ಆತನಿಗಾಗಿ ಬದುಕುವವರಾಗಿದ್ದೇವಾ ಎಂಬುದನ್ನು ಮಾತ್ರವೇ ದೇವರು ನೋಡುತ್ತಾರೆ. ನಾವು ಎಷ್ಟು ವರ್ಷ ಕರ್ತನಿಗಾಗಿ ಕೆಲಸ ಮಾಡಿದ್ದೇವೆ, ಎಷ್ಟು ದೊಡ್ಡ ಕಾರ್ಯಗಳನ್ನು ಸಾಧಿಸಿದ್ದೇವೆ ಎಂಬುದರ ಆಧಾರದ ಮೇಲೆ ದೇವರು ನಮ್ಮನ್ನು ನಿರ್ಣಯಿಸುವುದಿಲ್ಲ. ಬದಲಾಗಿ, ನಮಗೆ ನೀಡಲಾದ ಜವಾಬ್ದಾರಿಗಳನ್ನು ನಾವು ಎಷ್ಟು ನಿಷ್ಠೆಯಿಂದ ಪೂರೈಸಿದ್ದೇವೆ ಎಂಬುದನ್ನು ತಿಳಿದಿದ್ದಾರೆ. 

 

ದೇವರು ನಂಬಿಗಸ್ತರಿಗಾಗಿ ದೊಡ್ಡ ವಿಷಯಗಳನ್ನು ಮತ್ತು ಅದ್ಭುತವಾದ ಪ್ರತಿಫಲಗಳನ್ನು ಕಾದಿರಿಸಿದ್ದಾರೆ. ನೀವು ಮೋಸದ ಜೀವನವನ್ನು ನಡೆಸಬಹುದು ಮತ್ತು ನಿಮ್ಮ ಸಹ ಮನುಷ್ಯರನ್ನು ಮೋಸಗೊಳಿಸಬಹುದು. ಆದರೆ ದೇವರಿಗೆ ಎಲ್ಲವೂ ತಿಳಿದಿದೆ. "ಇಂಥ ಜ್ಞಾನವು ನನಗೆ ಬಹು ಆಶ್ಚರ್ಯವಾಗಿದೆ; ಅದು ಉನ್ನತವಾದದ್ದು" (139:6). ನನಗೆ ಪ್ರಿಯವಾದವರೇ, ನಮ್ಮನ್ನು ಶೋಧಿಸುವ, ನಮ್ಮ ಹೃದಯಗಳನ್ನು ತಿಳಿದಿರುವ, ನಮ್ಮನ್ನು ಪರೀಕ್ಷಿಸುವ ಮತ್ತು ನಮ್ಮ ಆಲೋಚನೆಗಳನ್ನು ತಿಳಿದಿರುವ ಕರ್ತನು ನಮ್ಮಿಂದ ದುಃಖವನ್ನು ಉಂಟುಮಾಡುವ ಮಾರ್ಗವನ್ನು ತೆಗೆದುಹಾಕಿ ನಿತ್ಯವಾದ ರಾಜ್ಯಕ್ಕೆ ಭಾಗಿಗಳಾಗಿ ಬದುಕಲು ನಮಗೆ ಸಹಾಯ ಮಾಡಲಿ. ಆಮೆನ್.

- Mrs. ಸರೋಜಾ ಮೋಹನ್ ದಾಸ್

 

ಪ್ರಾರ್ಥನಾ ಅಂಶ:

ನಮ್ಮ ಕ್ಯಾಂಪಸ್ ನಲ್ಲಿ ಪ್ರಾರ್ಥನಾ ಗೋಪುರವನ್ನು ನಿರ್ಮಿಸುವಂತೆ ಪ್ರಾರ್ಥಿಸಿರಿ.

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- info@vmm.org.in

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482


Comment As:

Comment (0)